July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಂಜು ಇಂಡೇನ್ ಗ್ಯಾಸ್‌ನಿಂದ ಅಸಮರ್ಪಕ ಗ್ಯಾಸ್ ವಿತರಣೆ: ಜಿಲ್ಲಾಧಿಕಾರಿ, ಬೆಳ್ತಂಗಡಿ ಪೊಲೀಸರಿಗೆ ಗ್ರಾಹಕರಿಂದ ದೂರು.

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಕಛೇರಿ ಹೊಂದಿರುವ ಇಂಡೇನ್ ಗ್ಯಾಸ್ ವಿತರಣ ಸಂಸ್ಥೆಯಾದ ಮಂಜು ಇಂಡೇನ್ ಗ್ಯಾಸ್ ಸಂಸ್ಥೆಯು ನಮಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ನೀಡದೇ ಸತಾಯಿಸುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸುವಂತೆ ಗುರುವಾಯನಕೆರೆ ನಿವಾಸಿಗಳಾದ ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಹಾಗೂ ಮಹಮ್ಮದ್ ರಫೀಕ್ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದಾರೆ.

ಅವರ ವಿತರಣ ವ್ಯವಸ್ಥೆಯಂತೆ ತಿಂಗಳು ಕಳೆದ ಬಳಿಕ ಗ್ಯಾಸ್ ಬುಕ್ ಮಾಡಿದರೂ ಸಿಲಿಂಡರ್ ನೀಡುತ್ತಿಲ್ಲ. ಬಡವರಾದ ನಮಗೆ ಅಡುಗೆಗೆ ಪರ್ಯಾಯ ವ್ಯವಸ್ಥೆ ಇಲ್ಲ. ಮನೆಮನೆಗೆ ತಲುಪಿಸುವ ವ್ಯವಸ್ಥೆ ಇದ್ದರೂ ಅವರು ಮಾಡುತ್ತಿಲ್ಲ. ಬದಲಾಗಿ ನಾವೇ ಅವರ ಕಛೇರಿಗೆ ಹೋಗಿ ಗ್ಯಾಸ್ ಬುಕ್ ಮಾಡಿ ರಶೀದಿ ಮಾಡಿದ ಬಳಿಕ ೧೦-೨೦ ದಿನಗಳ ಬಳಿಕ ಅವರ ಗೋದಾಮಿಗೆ ಹೋಗಿ ಸಿಲಿಂಡರ್ ಪಡೆಯಬೇಕಾಗಿದೆ. ಬೆಳ್ತಂಗಡಿಯಿAದ ಮದ್ದಡ್ಕ- ಪಡಂಗಡಿ ಕಡೆ ವಾಸವಿರುವ ನಾವು ಇದರಿಂದ ಗ್ಯಾಸ್ ಸಿಲಿಂಡರ್ ಪಡೆಯಲು ಬಹುದೂರ ಹೋಗಬೇಕಾಗಿದೆ. ಒಂದೊಮ್ಮೆ ಅಲ್ಲಿಗೆ ಹೋದರೂ ಮತ್ತೊಂದು ದಿನ ಬನ್ನಿ ಎಂದು ಸಾಗ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ಹೆಚ್ಚುವರಿ ಸಿಲಿಂಡರ್ ಪಡೆಯಲು ಅರ್ಜಿ ನೀಡಿದರೂ ಸಿಲಿಂಡರ್ ನೀಡದೇ ಸತಾಯಿಸುತ್ತಾರೆ. ಹೆಚ್ಚುವರಿ ಹಣ ಕಟ್ಟಿದರಷ್ಟೇ ಸಿಲಿಂಡರ್ ಪಡೆಯಬಹುದಾಗಿದೆ. ಹೆಸರು ಬದಲಾವಣೆಗೂ ಹೆಚ್ಚುವರಿ ಹಣ ತೆರಬೇಕಾಗಿದೆ. ಇಂತಹ ಅವ್ಯವಸ್ಥೆಗಳಿಂದ ಸಾರ್ವಜನಿಕರು ರೋಸಿ ಹೋಗಿದ್ದೇವೆ.

ಆದುದರಿಂದ ನಮಗೆ ಮನೆ ಬಳಕೆಯ ಸಮರ್ಪಕವಾದ ಗ್ಯಾಸ್ ಸಿಲಿಂಡರ್ ವಿತರಣೆಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

Related posts

ಮಚ್ಚಿನ ಸ.ಉ.ಹಿ.ಪ್ರಾ. ಶಾಲಾ ಎಸ್. ಡಿ ಎಮ್ ಸಿ ನೂತನ ಸಮಿತಿ ರಚನೆ

Suddi Udaya

ಉಜಿರೆ ಶ್ರೀ ಧ. ಮಂ.ಪದವಿ ಪೂರ್ವ ಕಾಲೇಜಿನಲ್ಲಿ “ಭಿತ್ತಿಪತ್ರಿಕೆ ಅನಾವರಣ”

Suddi Udaya

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ವಿದ್ಯಾರ್ಥಿ ಪರಿಷತ್ತು ಮತ್ತು ಶೈಕ್ಷಣಿಕ ಸಂಘಗಳ ಉದ್ಘಾಟನೆ

Suddi Udaya

ಮುಂಡಾಜೆ ಗ್ರಾ.ಪಂ. ಸಿಬ್ಬಂದಿ ಜನಾರ್ದನ ನಾಯ್ಕ ನಿಧನ

Suddi Udaya

ಸೆ.5: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ರೋಟರಿ ಕ್ಲಬ್ ಮಡಂತ್ಯಾರ್ ಗೆ ಪ್ರತಿಷ್ಠಿತ ಪ್ಲಾಟಿನಂ ಕ್ಲಬ್ ಪ್ರಶಸ್ತಿ

Suddi Udaya
error: Content is protected !!