ಮಡಂತ್ಯಾರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಕರ್ನಾಟಕ ಟೂರಿಸ್ಟ್ ವಾಹನ ಚಾಲಕ ಮಾಲಕರ ಸಂಘ(ನೋ), ಬಿಂಎಂಬಿ ಸಮನ್ವಯ ಜೀತೋ ಚಾಲಕ ಮಾಲಕ ಸಂಘ ಬಿಸಿ ರೋಡ್ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಸದಸ್ಯ ಹಕೀಂ ಎಸ್ ರವರ ಪುತ್ರ ಶಾಝಾದ್ ಸುನ್ನತ್ಕೆರೆ ಸರ್ಕಾರಿ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಗುಣಾಕಾರ ಪೂಜಾರಿ ಮಗ ಹಿತೇಶ್, ಕೋಶಾಧಿಕಾರಿಯದ ರಫೀಕ್ ಕೊಲ್ಪದಬೈಲು ಪುತ್ರಿ ಫಾತಿಮತ್ ರೈಸನಾ, ಸದಸ್ಯರಾದ ಸುರೇಶ ಮದ್ದ ಪುತ್ರಿ ಚಂದನ ಖಲೀಲ್ ಬೆಳ್ತಂಗಡಿ ಪುತ್ರಿ ಫಾತಿಮತ್ ಫಿದ ಅವರನ್ನು ಸಂಘದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಬಿಂಎಂಬಿ ಸಮನ್ವಯ ಜೀತು ಚಾಲಕ ಮಾಲಕ ಸಂಘ ಬಿಸಿ ರೋಡ್ ಇದರ ಅಧ್ಯಕ್ಷ ರಫೀಕ್ ಕನ್ನಡಿಕಟ್ಟೆ ಇವರ ನೇತೃತ್ವದಲ್ಲಿ ಕಾರ್ಯದರ್ಶಿಗಳಾದ ಗುಣಾಕಾರ ಪೂಜಾರಿ ಉಪಾಧ್ಯಕ್ಷ ಇಕ್ಬಾಲ್ ಪಣಕಜೆ, ಕೋಶಧಿಕಾರಿ ರಫೀಕ್ ಕೊಲ್ಪದಬೈಲ್, ಸದಸ್ಯರುಗಳಾದ ನಾಸಿರ್ ವಗ್ಗ, ಹಕೀಂ ಸುನ್ನತ್ಕೆರೆ, ಸುರೇಶ್ ಮದ್ದ, ಅಶ್ರಫ್ ಎನ್ಸಿರೋಡ್ . ಮೋಹನ್ ಮದ್ದ ಉಪಸ್ಥಿತರಿದ್ದರು.














