ಬೆಳ್ತಂಗಡಿ: ತಾಲೂಕು ಪಂಚಾಯತ್ ಮುಂಭಾಗದಲ್ಲಿ ಪ್ರಸಾದ್ ಕೆ.ಎಸ್. ರವರ ನೂತನ ವಕೀಲರ ಕಛೇರಿ ಸುಜಾತ ಕೃಷ್ಣ ಲಾ ಛೇಂಬರ್ ಮೇ 2ರಂದು ಶುಭಾರಂಭಗೊಂಡಿತು.
ಕಛೇರಿ ಉದ್ಘಾಟನೆಯನ್ನು ಲಾಯಿಲ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ ಗೌಡ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ವೈ. ರಾಧಾಕೃಷ್ಣ, ವಕೀಲ ಸುವ್ರತ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಲೋಸಿಯಸ್ ಲೋಬೊ, ವಾಸುದೇವ್, ಹೈಕೋರ್ಟ್ ನ್ಯಾಯವಾದಿ ಅರ್ಚನಾ ಉಪಸ್ಥಿತರಿದ್ದರು.
ನ್ಯಾಯವಾದಿ ಶೈಲೇಶ್ ಠೋಸರ್ ಕಾರ್ಯಕ್ರಮ ನಿರೂಪಿಸಿದರು.














