August 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ : 10 ತಿಂಗಳು ಕಳೆದರೂ ಕಾರ್ಮಿಕರಿಗೆ ಸಿಗದ ಕೂಲಿ, ಬಾಡಿಗೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣದ ತನಿಖೆಗಾಗಿ ಎಸ್‌ಐಟಿ ಕಾರ್ಯಾಚರಣೆ ಮುಗಿದು 10 ತಿಂಗಳು ಕಳೆದರೂ ಅಲ್ಲಿ ದುಡಿದ ಕಾರ್ಮಿಕರಿಗೆ, ಜೆಸಿಬಿ ಒದಗಿಸಿದವರಿಗೆ ಹಣ ಪಾವತಿಯಾಗಿಲ್ಲ.ಬಿಲ್ ಪಾವತಿಗಾಗಿ ಅಲೆದಾಡುವಂತಾಗಿದೆ ಎಸ್‌ಐಟಿ 2025ರ ಜು. 28ರಂದು ಚಿನ್ನಯ್ಯನನ್ನು ಕರೆತಂದು ಸ್ಥಳ ಗುರುತಿಸಿತ್ತು. ಜು. 28ರಿಂದ ಆ. 13ರ ವರೆಗೆ ಪ್ರತಿದಿನ 10-12 ಕಾರ್ಮಿಕರು ಕೆಲಸ ಮಾಡಿದ್ದು, ಸುಮಾರು 80,000 ರೂ. ನೀಡಬೇಕಿದೆ.

ಜು. 29ರಿಂದ ಆ. 13ರವರೆಗೆ ಒಟ್ಟು 17 ಪಾಯಿಂಟ್‌ಗಳಲ್ಲಿ ಕಾರ್ಮಿಕರಿಂದ ಉತ್ಪನನ ನಡೆಸಲಾಗಿತ್ತು. ಜತೆಗೆ ಮಣ್ಣು ಅಗೆಯಲು ಜೆಸಿಬಿ ಬಳಸಲಾಗಿತ್ತು. 13 ಪಾಯಿಂಟ್‌ಗಳಲ್ಲಿ ಜೆಸಿಬಿ ಕೆಲಸ ಮಾಡಿತ್ತು. 13ನೇ ಪಾಯಿಂಟ್ ದೊಡ್ಡದಾಗಿ ಅಗೆದ ಕಾರಣ ಸಣ್ಣ -ದೊಡ್ಡ ಎರಡೂ ಜೆಸಿಬಿ ಬಳಸಲಾಗಿತ್ತು. ಹೆಚ್ಚಿನ ಕಾರ್ಯಾಚರಣೆಗೆ ಹೆಚ್ಚುವರಿ ಜೆಸಿಬಿಗಳನ್ನು ಕಾಯ್ದಿರಿಸಲಾಗಿತ್ತು. ಪ್ರಸ್ತುತ ಜೆಸಿಬಿ ಕೆಲಸ ಮಾಡಿದ ಗಂಟೆಗೆ ಮಾತ್ರ ಬಿಲ್ (71,500 ರೂ.) ಸಲ್ಲಿಸಲಾಗಿದೆ. ಶಾಮಿಯಾನ, ಹಾರೆ, ಪಿಕ್ಕಾಸು, ಕುಡಿಯುವ ನೀರು ಹಾಗೂ ವಾಹನ ಬಾಡಿಗೆ ಸಹಿತ ಒಟ್ಟು ಬಾಕಿ ಮೊತ್ತ 2 ಲಕ್ಷ ರೂ. ದಾಟಿದೆ.

ಎಸ್.ಐಟಿ ಸೂಚನೆಯಂತೆ ಧರ್ಮಸ್ಥಳ ಗ್ರಾಮ ಪಂಚಾಯತ್, ಕಾರ್ಮಿ ಕರನ್ನು ಹಾಗೂ ಜೆಸಿಬಿ ಒದಗಿಸಿತ್ತು. ನಿಯಮದಂತೆ ಪಂಚಾಯತ್ ನಿಧಿಯನ್ನು ಎಸ್ ಐಟಿ ಕೆಲಸಕ್ಕೆ ಬಳಸುವಂತಿಲ್ಲ ಎನ್ನಲಾಗಿದೆ. ಇತ್ತ ಎಸ್‌ಐಟಿ ಕಚೇರಿಗೆ ಹೋದರೆ ‘ಬಿಲ್ ಕಳುಹಿಸಲಾಗಿದೆ’ ಎಂಬ ಹಾರಿಕೆ ಉತ್ತರ ಸಿಗುತ್ತಿದೆ. ಇದರಿಂದ ಕಾರ್ಮಿಕರು ಮತ್ತಿತರರು ಬಾಕಿ ಬಿಲ್ ಅನ್ನು ಯಾರಲ್ಲಿ ಕೇಳುವುದು ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ.

ಬಿಲ್‌ ಪಾವತಿ ಬಾಕಿ ಇರುವ ಬಗ್ಗೆ ನನಗೆ ಮಾಹಿತಿಯಿಲ್ಲ, ನಾವು ತನಿಖೆಯನ್ನಷ್ಟೇ ನಡೆಸುತ್ತೇವೆ. ಆದರೂ ಈ ವಿಷಯದ ಬಗ್ಗೆ ಪರಿಶೀಲಿಸುವೆ. – ಪ್ರಣಬ್ ಮೊಹಾಂತಿ, ಎಸ್‌ಐಟಿ ಮುಖ್ಯಸ್ಥರು

Related posts

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿಗೆ ತಾ.ಪಂ ಇಓ ಭೇಟಿ, ಸ್ಥಳ ಪರಿಶೀಲನೆ

Suddi Udaya

ಪುದುವೆಟ್ಟು: ಬೇರಿಕೆ ನಿವಾಸಿ ಲಿಂಗಪ್ಪ ರೈ ನಿಧನ

Suddi Udaya

ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ, ಕಠಿಣ ಕ್ರಮಕೈಗೊಳ್ಳುವಂತೆ ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದಿಂದ ಜಿಲ್ಲಾಧಿಕಾರಿಯವರಿಗೆ, ಪೊಲೀಸ್ ಕಮಿಷನರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ

Suddi Udaya

ಸಕಾಲದಲ್ಲಿ ತಾಲೂಕಿನ ಶಿಕ್ಷಕರ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಿ -ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಯೋಗೇಶ ಹೆಚ್ ಆರ್

Suddi Udaya

ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ನಿರ್ಗಮಿತ ಟ್ರಸ್ಟಿಗಳಿಗೆ ಬೀಳ್ಕೊಡುಗೆ

Suddi Udaya

ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಸುರ್ಯ ಶ್ರೀ ಸದಾಶಿವ ದೇವಾಸ್ಥಾನದಲ್ಲಿ ಜಾತ್ರೋತ್ಸವ

Suddi Udaya
error: Content is protected !!