23.3 C
ಪುತ್ತೂರು, ಬೆಳ್ತಂಗಡಿ
August 13, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಪೈ ಅವರಿಗೆ ಉಜಿರೆ ವರ್ತಕರ ಸಂಘದಿಂದ ಗೌರವ ಸನ್ಮಾನ-ಉಜಿರೆ ನನ್ನನ್ನು ಬೆಳೆಸಿದ, ಪೋಷಿಸಿದ ಊರು: ಉದ್ಯಮಿ ರಾಜೇಶ್ ಪೈ

ಉಜಿರೆ: ಉದ್ಯಮ ಮತ್ತು ಸಮಾಜ ಸೇವೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಪೈ ಅವರಿಗೆ ಉಜಿರೆ ವರ್ತಕರ ಸಂಘದಿಂದ ಗೌರವ ಸನ್ಮಾನವು ಓಶಿಯನ್ ಪರ್ಲ್ ಹೋಟೇಲ್ ನಲ್ಲಿ ಮೇ 11ರಂದು ನಡೆಯಿತು.

ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ‌ಎಸ್ ಮಾತನಾಡಿ ಜಿಲ್ಲೆಯ ಪ್ರಸಿದ್ದ ಉದ್ಯಮಿ ರಾಜೇಶ್ ಪೈ ಅವರು ಕಳೆದ ಮೂರುವರೆ ದಶಕಗಳಿಂದ ಉದ್ಯಮ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಶಕ್ತಿಯಾಗಿದ್ದಾರೆ ಎಂದರು.

ವರ್ತಕರ ಸಂಘದ ಗೌರವ ಸ್ವೀಕರಿಸಿ ಮಾತನಾಡಿದ ರಾಜೇಶ್ ಪೈ ಅವರು ಉಜಿರೆಯಲ್ಲಿ ಸುಮಾರು 900ಕ್ಕೂ ಹೆಚ್ಚು ಅಂಗಡಿಗಳಿವೆ. ಉಜಿರೆ ನನ್ನನ್ನು ಬೆಳೆಸಿದ ಊರು. ಸಣ್ಣ ಪ್ರಾಯದಲ್ಲೇ ತಂದೆಯವರೊಂದಿಗೆ ನಾನು ಅಂಗಡಿಗಳಲ್ಲಿ ವ್ಯಾಪರ ಮಾಡಲು ಪ್ರಾರಂಬಿಸಿದೆ.ಈ ಪ್ರಶಸ್ತಿಯನ್ನು ಉಜಿರೆ ಊರಿಗೆ, ಶ್ರೀ ಮಂಜುನಾಥ ಸ್ವಾಮಿ, ಶ್ರೀ ಜನಾರ್ದನ ಸ್ವಾಮಿಗೆ ಹಾಗೂ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅರ್ಪಿಸುತ್ತೇನೆ. ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಬೇಗ ಬೆಳೆದ ನಗರ ಉಜಿರೆ. ಶಿಕ್ಷಣ ಕ್ಷೇತ್ರಗಳು ಬೆಳೆದಿದೆ. ಎಲ್ಲರಿಗೂ ವ್ಯಾಪರ ಇದೆ. ಆದರೆ ಉಜಿರೆಯ ಇವತ್ತಿನ ಪರಿಸ್ಥಿತಿ ನೋಡುವಾಗ ಬೇಜಾರಾಗುತ್ತದೆ. ಉಜಿರೆ ಲವಲವಿಕೆಯಿಂದ ಇರಬೇಕು. ಸದಾ ಸಹಕಾ ಸಹಬಾಳ್ವೆಯಿಂದ ಇರುವಂತಾಗಬೇಕು.ವರ್ತಕರ ಸಂಘದ ಜೊತೆ ಸದಾ ಇರುತ್ತೇನೆ ಎಂದರು.

ವರ್ತಕರಾದ ರವಿ ಕುಮಾರ್ ಬರಮೇಲು ಮಾತನಾಡಿ ರಾಜೇಶ್ ಪೈ ಅವರಿಗೆ ಇಂತಹ ಪ್ರಶಸ್ತಿ ಬಂದಿರುವುದು ನಮಗೆ ತುಂಬಾ ಸಂತೋಷವಾಗಿದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ರಾಜೇಶ್ ಅವರದು. ‌ಯಾವುದೇ ಕಾರ್ಯಕ್ರಮಕ್ಕೂ ಪೂರ್ಣ ಪ್ರಮಾಣದ ಸಹಕಾರ ನೀಡುತ್ತಿದ್ದರು ಎಂದರು.

ಹಳ್ಳಿಮನೆ ಪ್ರವೀಣ್ ಫೆರ್ನಾಂಡೀಸ್ ಅವರು ಮಾತನಾಡಿ 2013ರಲ್ಲಿ ಉಜಿರೆಯಲ್ಲಿ ಉದ್ಯಮ ಮಾಡುವಾಗ,ಕಷ್ಟದ ಸಮಯದಲ್ಲಿ ನನಗೆ ತುಂಬಾ ಸಹಕಾರ ನೀಡಿದವರು ರಾಜೇಶ್ ಪೈ ಅವರು ಎಂದರು.

ವೇದಿಕೆಯಲ್ಲಿ ವರ್ತಕರ ಸಂಘದ ನಿಕಟಪೂರ್ವಾಧ್ಯಕ್ಷ ಅರವಿಂದ್ ಕಾರಂತ್, ಪ್ರ‌.ಕಾರ್ಯದರ್ಶಿ ವಿಶ್ವನಾಥ ಭಂಡಾರಿ, ಕೋಶಾಧಿಕಾರಿ ಅಬೂಬಕ್ಕರ್ ಉಪಸ್ಥಿತರಿದ್ದರು.

ರಾಜೇಶ್ ಪೈ ಅವರನ್ನು ವರ್ತಕರು ಫಲ ಪುಷ್ಪ ನೀಡಿ, ಹಾರ, ಶಾಲು ಹಾಕಿ, ಮೈಸೂರು ಪೇಟ ಧರಿಸಿ, ಹೂ ಗುಚ್ಚ ನೀಡಿ ಸನ್ಮಾನಿಸಿ, ಗೌರವಿಸಿದರು.

Related posts

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಕುವೆಂಪುರವರ ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ

Suddi Udaya

ಮುಂಡಾಜೆ ಪ್ರಾ.ಕೃ.ಪ. ಸ. ಸಂಘದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ 145ನೇ ಜನ್ಮದಿನ ಆಚರಣೆ

Suddi Udaya

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನದ ಅಂಗವಾಗಿ ಮುಗೇರಡ್ಕ‌ ದೈವಸ್ಥಾನದಲ್ಲಿ‌ ಗಿಡ ನಾಟಿ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Suddi Udaya

ಟಿಪ್ಪರ್ ವಾಹನದ ಬಾಡಿಗೆ ಕೇಳಲು ಹೋದವನ ಮೇಲೆ ಹಲ್ಲೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅ.17: ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಇದರ ನೇತೃತ್ವದಲ್ಲಿ ಅಂಗಾಂಗ ದಾನ ನೊಂದಣಿ

Suddi Udaya
error: Content is protected !!