ಬೆಳ್ತಂಗಡಿ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಂ ಕನ್ಯಾಡಿ ಧರ್ಮಸ್ಥಳ ಇಲ್ಲಿಯ ಪೀಠಾಧ್ಯಕ್ಷರು ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಕ್ಷೇತ್ರದ ಶಾಖಾ ಮಠ ನಿರ್ಮಾಣದ ಕಾರ್ಯ ಪ್ರಾರಂಭವಾಗಿದ್ದು ಈ ನಿರ್ಮಾಣ ಕಾರ್ಯವನ್ನು ಮಾಜಿ ಸಂಸದರು ಹಾಗೂ ಇದರ ನಿರ್ಮಾಣ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ವೀಕ್ಷಿಸಿದರು.


ಈ ಸಂದರ್ಭದಲ್ಲಿ ದೆಹಲಿಯ ಉದ್ಯಮಿಗಳಾದ ರಾಕೇಶ್ ಸಿಂಗ್ ಮತ್ತು ಮಠದ ಸ್ವಾಮೀಜಿಯ ಶಿಷ್ಯ ವೃಂದದವರು ಉಪಸ್ಥಿತರಿದ್ದರು.












