22.6 C
ಪುತ್ತೂರು, ಬೆಳ್ತಂಗಡಿ
July 23, 2026
ಬೆಳ್ತಂಗಡಿ

ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.142.59 ಕೋಟಿ ವಾರ್ಷಿಕ ವ್ಯವಹಾರ, ರೂ.54 ಲಕ್ಷ ಲಾಭ, ಸದಸ್ಯರಿಗೆ 10% ಡಿವಿಡೆಂಟ್:ಸಹಕಾರಿ ಸಂಘದ ಪ್ರಗತಿಯ ಹಿಂದೆ ಸದಸ್ಯರ ಕೊಡುಗೆ ಅಪಾರ: ರಂಜನ್ ಜಿ ಗೌಡ

ಉಜಿರೆ: ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಅವರ ಅಧ್ಯಕ್ಷತೆಯಲ್ಲಿ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸೆ.7ರಂದು ನಡೆಯಿತು.

ವರದಿ ಸಾಲಿನಲ್ಲಿ ಸಂಘವು 1688 ಸದಸ್ಯರನ್ನು ಹೊಂದಿದ್ದು 2,21,05,718 ಕೋಟಿ ಪಾಲು ಬಂಡವಾಳ ಸಂಗ್ರಹ ವಾಗಿರುತ್ತದೆ. 26,77,01,956 ಕೋಟಿ ಠೇವಣಿ ಸಂಗ್ರಹಿಸಿ ಒಟ್ಟು 26,20,6972 ಕೋಟಿ ಸದಸ್ಯರು ಸಾಲ ಪಡೆದುಕೊಂಡಿದ್ದಾರೆ.ವರದಿ ಸಾಲಿನಲ್ಲಿ ಒಟ್ಟು 142.59 ಕೋಟಿ ವ್ಯವಹಾರ ನಡೆಸಿ ರೂ. 54,35,515ರಷ್ಟು ಲಾಭಗಳಿಸಿದೆ. ಸದಸ್ಯರಿಗೆ ಶೇ 10% ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಸಭೆಯಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ, ನಿರ್ದೇಶಕರಾದ ಕೆ. ಗಂಗಾದರ ಗೌಡ, ಎನ್ ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ದಾಮೋದರ ಗೌಡ ಸುರುಳಿ, ಕೆ. ಜಯಂತ್ ಗೌಡ ಗುರಿಪಳ್ಳ,ಸುಂದರ ಗೌಡ ಫುಡ್ಕೆತ್ತು, ಬಿ.ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ ಅಡ್ಕಡಿ, ಜಯಂತ್ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಬಂಗಾಡಿ, ಕೆ. ಸಂಜೀವ ಗೌಡ ಪಾಂಚಜನ್ಯ, ಶ್ರೀಮತಿ ಸರೋಜಿನಿ ವಿಜಯ, ಶ್ರೀಮತಿ ಚೇತನಾ ಚಂದ್ರಶೇಖರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ಮಂಡಿಸಿದರು.ಉಪಾಧ್ಯಕ್ಷ ಶಿವಕಾಂತ ಗೌಡ ಸ್ವಾಗತಿಸಿದರು. ನಿರ್ದೇಶಕ ದಾಮೋದರ ಗೌಡ ವಂದಿಸಿದರು. ವ್ಯವಸ್ಥಾಪಕ ನಿತಿನ್ ಗೌಡ ಕಾರ್ಯಕ್ರಮ ನಿರೂಪಿಸಿದರು, ಸಿಬಂದಿಗಳಾದ ನಿತಿನ್ ಗೌಡ, ದೀಕ್ಷಿತ್ ಗೌಡ, ಶ್ರೀಮತಿ ರೂಪಲತಾ ಗೌಡ, ಶ್ರೀಮತಿ ಭವ್ಯ ಗೌಡ, ಶ್ರೀನಾಥ್ ಗೌಡ, ಸುಧಾಕರ ಗೌಡ, ಜಿತೇಶ್ ಗೌಡ, ಶ್ರೀಮತಿ ಅಶ್ವಿತಾ, ಶ್ರೀಮತಿ ನಿಕಿಲಾ, ಪುಣ್ಯ, ನಿತ್ಯ ನಿಧಿ ಸಂಗ್ರಹಕರು ವಸಂತ ಗೌಡ, ಮಧುಕರ ಗೌಡ, ಪರಮೇಶ್ವರ ಗೌಡ, ವಿನೋದ್ ಗೌಡ, ಶ್ರೀಮತಿ ಲೀಲಾವತಿ ರಾಘವ ಗೌಡ, ಶಿವಾಜಿ ಗೌಡ, ಸುಜಯ್ ಗೌಡ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಹೇಮಾವತಿ, ರಾಜೇಂದ್ರ ಗೌಡ, ಶ್ರೀಮತಿ ಹರಿನಾಕ್ಷಿ ಸಹಕರಿಸಿದರು. 2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಮತ್ತು ಪಿ ಯು ಸಿ ಯಲ್ಲಿ ಶೇ 85ಕಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ,ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಧೈನಿಕ್ ಠೇವಣಿ ಸಂಗ್ರಾಹಕರನ್ನು ಗೌರವಿಸಲಾಯಿತು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ಕೌಶಲ್ಯ, ನಾಯಕತ್ವ ಮತ್ತು ಸಹಭಾಗಿತ್ವ ಚಟುವಟಿಕೆಯ ತರಬೇತಿ ಕಾರ್ಯಕ್ರಮ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಮಹಿಳಾ ಬ್ಯೂಟೀಪಾರ್ಲರ್ ಮತ್ತು ಮದುಮಗಳ ಶೃಂಗಾರ -ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ಪುದುವೆಟ್ಟು : ನೂತನ ಬಸದಿಯ ಪಂಚಕಲ್ಯಾಣ ಮತ್ತು ನೂತನ ಬಿಂಬದ ಪ್ರತಿಷ್ಠಾ ಮಹೋತ್ಸವ

Suddi Udaya

ಪ್ರಸಾರ ಭಾರತಿ ದೂರದರ್ಶನದಲ್ಲಿ ಇಳಂತಿಲದ ಭರತನಾಟ್ಯ ಕಲಾವಿದೆ ಕೃತಿ ಕೈಲಾರ್‌ಗೆ ಮಾನ್ಯತೆ

Suddi Udaya

ಧರ್ಮಸ್ಥಳಕ್ಕೆ ಬಂದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

Suddi Udaya
error: Content is protected !!