24.4 C
ಪುತ್ತೂರು, ಬೆಳ್ತಂಗಡಿ
July 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡ್ಡಿ: ಗ್ರಾಹಕರ ಪರದಾಟ

ಬೆಳ್ತಂಗಡಿ: ತಾಲೂಕಿನಲ್ಲಿ ಪಡಿತರ ಪಡೆಯಲು ಸರ್ವರ್ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಕಾದು ಕಾದು ಬಸವಳಿಯುತ್ತಿದ್ದಾರೆ. ಮೇ 15ರಂದು ಈ ತಿಂಗಳ ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭವಾಗಿದ್ದು, ಆರಂಭದಿಂದಲೂ ಸರ್ವರ್ ಸಮಸ್ಯೆ ಕಂಡು ಬಂದಿತ್ತು. ಇದೀಗ ಮತ್ತಷ್ಟು ಸಮಸ್ಯೆ ಮುಂದುವರಿದಿದೆ.

ಪಡಿತರ ಸಾಮಗ್ರಿ ವಿತರಣೆಗೆ ಕಾರ್ಡ್ ದಾರರ ‘ಥಂಬ್’ ಅಗತ್ಯವಾಗಿದ್ದು, ಈ ವೇಳೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ನ್ಯಾಯಬೆಲೆ ಅಂಗಡಿ ತೆರೆಯುವ ಮೊದಲೇ ಸರದಿ ಸಾಲಲ್ಲಿ ನಿಲ್ಲುವ ಗ್ರಾಹಕರಿಗೆ ಕೆಲವೊಮ್ಮೆ ಸಂಜೆವರೆಗೂ ಕಾದರೂ ಪಡಿತರ ಸಾಮಗ್ರಿ ಸಿಗುತ್ತಿಲ್ಲ. ಮೇ 31 ಈ ತಿಂಗಳ ಪಡಿತರ ಅಕ್ಕಿ ಪಡೆಯಲು’ ಕೊನೆಯ ದಿನವಾಗಿದೆ. ಮೇ 31 ಭಾನುವಾರ ಆಗಿದ್ದು, ಹೆಚ್ಚಿನ ಪಡಿತರ ಅಂಗಡಿಗಳಿಗೆ ರಜೆ ಇರುವ ಕಾರಣ 30ರೊಳಗೆ ಪಡಿತರ ಪಡೆಯಬೇಕಿದೆ. ಒಂದು ‘ಥಂಬ್ ಪಡೆಯಲು ಕೆಲವೊಮ್ಮೆ ಅರ್ಧ ಗಂಟೆಗಿಂತಲೂ ಅಧಿಕ ಸಮಯ ಬೇಕಾಗುತ್ತಿದ್ದು ದಿನಕ್ಕೆ ಗರಿಷ್ಠ 20 ಮಂದಿ ಮಾತ್ರ ಪಡಿತರ ಪಡೆಯುವಂತಾಗಿದೆ. ‘ಥಂಬ್’ ಸಮಸ್ಯೆ ಕುರಿತು ಅರ್ಥವಾಗದ ಕೆಲವು ಮಂದಿ ನ್ಯಾಯಬೆಲೆ ಅಂಗಡಿಯವರನ್ನು ತರಾಟೆಗೆ ತೆಗೆದುಕೊಳ್ಳುವುದು ಕಂಡುಬಂದಿದೆ.

ತಾಲೂಕಿನ ಒಂದೊಂದು ಅಂಗಡಿಯಲ್ಲೂ ಅಧಿಕ ಪಡಿತರ ನ್ಯಾಯಬೆಲೆ 500ಕ್ಕಿಂತಲೂ ಚೀಟಿದಾರರಿದ್ದು, ಕೆಲವೆಡೆ ಇನ್ನು 200ಕ್ಕಿಂತ ಅಧಿಕ ಮಂದಿ ಪಡಿತರ ಪಡೆಯಲು ಬಾಕಿ ಇದೆ. ಸಹಕಾರ ಸಂಘಗಳಲ್ಲಿರುವ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯಕ್ಕಿಂತ ಅಧಿಕ ಹೊತ್ತು ಪಡಿತರ ವಿತರಣೆ ಸೇವೆ ನೀಡುವುದು ಕಂಡು ಬರುತ್ತಿದೆ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರಿಂದಲೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಮೇ ತಿಂಗಳ ಪಡಿತರ ಪಡೆಯಲು ದಿನಾಂಕ ವಿಸ್ತರಿಸದಿದ್ದರೆ ಹಲವು ಮಂದಿ ಕಾರ್ಡ್‌ದಾರರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

Related posts

ಮಲೆಂಗಲ್ಲು ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಂಗಳೂರಿನ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿಯಿಂದ ಸೇವಾಭಾರತಿ ಸಂಸ್ಥೆಗೆ ಉಪಕರಣಗಳ ಹಸ್ತಾಂತರ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ. ಹಿ. ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಾಮಾನ್ಯ ಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೆಲಸಕ್ಕೆ ಬಂದ ಮಹಿಳೆಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Suddi Udaya

ಬೆಳ್ತಂಗಡಿ ಲಿಯೋ ಕ್ಲಬ್ ನ ಪದಗ್ರಹಣ ಸಮಾರಂಭ

Suddi Udaya
error: Content is protected !!