September 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡ್ಡಿ: ಗ್ರಾಹಕರ ಪರದಾಟ

ಬೆಳ್ತಂಗಡಿ: ತಾಲೂಕಿನಲ್ಲಿ ಪಡಿತರ ಪಡೆಯಲು ಸರ್ವರ್ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಕಾದು ಕಾದು ಬಸವಳಿಯುತ್ತಿದ್ದಾರೆ. ಮೇ 15ರಂದು ಈ ತಿಂಗಳ ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭವಾಗಿದ್ದು, ಆರಂಭದಿಂದಲೂ ಸರ್ವರ್ ಸಮಸ್ಯೆ ಕಂಡು ಬಂದಿತ್ತು. ಇದೀಗ ಮತ್ತಷ್ಟು ಸಮಸ್ಯೆ ಮುಂದುವರಿದಿದೆ.

ಪಡಿತರ ಸಾಮಗ್ರಿ ವಿತರಣೆಗೆ ಕಾರ್ಡ್ ದಾರರ ‘ಥಂಬ್’ ಅಗತ್ಯವಾಗಿದ್ದು, ಈ ವೇಳೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ನ್ಯಾಯಬೆಲೆ ಅಂಗಡಿ ತೆರೆಯುವ ಮೊದಲೇ ಸರದಿ ಸಾಲಲ್ಲಿ ನಿಲ್ಲುವ ಗ್ರಾಹಕರಿಗೆ ಕೆಲವೊಮ್ಮೆ ಸಂಜೆವರೆಗೂ ಕಾದರೂ ಪಡಿತರ ಸಾಮಗ್ರಿ ಸಿಗುತ್ತಿಲ್ಲ. ಮೇ 31 ಈ ತಿಂಗಳ ಪಡಿತರ ಅಕ್ಕಿ ಪಡೆಯಲು’ ಕೊನೆಯ ದಿನವಾಗಿದೆ. ಮೇ 31 ಭಾನುವಾರ ಆಗಿದ್ದು, ಹೆಚ್ಚಿನ ಪಡಿತರ ಅಂಗಡಿಗಳಿಗೆ ರಜೆ ಇರುವ ಕಾರಣ 30ರೊಳಗೆ ಪಡಿತರ ಪಡೆಯಬೇಕಿದೆ. ಒಂದು ‘ಥಂಬ್ ಪಡೆಯಲು ಕೆಲವೊಮ್ಮೆ ಅರ್ಧ ಗಂಟೆಗಿಂತಲೂ ಅಧಿಕ ಸಮಯ ಬೇಕಾಗುತ್ತಿದ್ದು ದಿನಕ್ಕೆ ಗರಿಷ್ಠ 20 ಮಂದಿ ಮಾತ್ರ ಪಡಿತರ ಪಡೆಯುವಂತಾಗಿದೆ. ‘ಥಂಬ್’ ಸಮಸ್ಯೆ ಕುರಿತು ಅರ್ಥವಾಗದ ಕೆಲವು ಮಂದಿ ನ್ಯಾಯಬೆಲೆ ಅಂಗಡಿಯವರನ್ನು ತರಾಟೆಗೆ ತೆಗೆದುಕೊಳ್ಳುವುದು ಕಂಡುಬಂದಿದೆ.

ತಾಲೂಕಿನ ಒಂದೊಂದು ಅಂಗಡಿಯಲ್ಲೂ ಅಧಿಕ ಪಡಿತರ ನ್ಯಾಯಬೆಲೆ 500ಕ್ಕಿಂತಲೂ ಚೀಟಿದಾರರಿದ್ದು, ಕೆಲವೆಡೆ ಇನ್ನು 200ಕ್ಕಿಂತ ಅಧಿಕ ಮಂದಿ ಪಡಿತರ ಪಡೆಯಲು ಬಾಕಿ ಇದೆ. ಸಹಕಾರ ಸಂಘಗಳಲ್ಲಿರುವ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯಕ್ಕಿಂತ ಅಧಿಕ ಹೊತ್ತು ಪಡಿತರ ವಿತರಣೆ ಸೇವೆ ನೀಡುವುದು ಕಂಡು ಬರುತ್ತಿದೆ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರಿಂದಲೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಮೇ ತಿಂಗಳ ಪಡಿತರ ಪಡೆಯಲು ದಿನಾಂಕ ವಿಸ್ತರಿಸದಿದ್ದರೆ ಹಲವು ಮಂದಿ ಕಾರ್ಡ್‌ದಾರರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

Related posts

ಧರ್ಮಸ್ಥಳ: ನೇತ್ರಾವತಿ ಸೇತುವೆಯ ಕೆಳಗೆ ಅಪರಿಚಿತ ಶವ ಪತ್ತೆ

Suddi Udaya

ಬೆಳ್ತಂಗಡಿ ಬಂಟರ ವಲಯ ಸಮಿತಿ ವತಿಯಿಂದ ಆಟಿಡೊಂಜಿ ದಿನ

Suddi Udaya

ಅಳದಂಗಡಿಯಲ್ಲಿ ಹಿಂದೂ ರುದ್ರಭೂಮಿಗಾಗಿ ಮೀಸಲಾಗಿರುವ ಜಾಗವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ಗುಂಡೂರಿ ದ.ಕ.ಜಿ.ಪಂ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಕಿಟ್ ವಿತರಣೆ

Suddi Udaya

ಬೆಳ್ತಂಗಡಿ ತೆರಿಗೆ ಸಲಹೆಗಾರ ಸಂದೇಶ ರಾವ್ ರವರ ಕಛೇರಿಯು ಸ್ಥಳಾಂತರಗೊಂಡು ಶುಭಾರಂಭ

Suddi Udaya

ಮಿತ್ತಬಾಗಿಲು ಗ್ರಾಮ ಪಂಚಾಯತ್ ನಲ್ಲಿ 79ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya
error: Content is protected !!