24.2 C
ಪುತ್ತೂರು, ಬೆಳ್ತಂಗಡಿ
September 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಪತ್ತನಾಜೆ ಗೆಜ್ಜೆ ಸೇವೆ ಸಮಾಪ್ತಿ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಪತ್ತನಾಜೆ ಪ್ರಯುಕ್ತ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಮೂಡಬಿದ್ರೆ ಶಿವಾನಂದ ಶಾಂತಿಯವರ ಪೌರೋಹಿತ್ಯದಲ್ಲಿ ಮೇ 27ರಂದು ಧೂಮಾವತಿ ಮತ್ತು ದೇಯೀ ಬೈದೆದಿ ಸನ್ನಿಧಿಯಲ್ಲಿ ಗೆಜ್ಜೆ ಸೇವೆ ಮಾಡಿ ಶ್ರೀ ದೇಯಿ ಬೈದೆದಿ ಹಾಗೂ ಆದಿ ದೂಮಾವತಿಗೆ ಮಹಾ ಮಂಗಳಾರತಿ ಮಾಡುವುದರೊಂದಿಗೆ ಶ್ರೀ ಗೆಜ್ಜೆಗಿರಿ ಮೇಳದ ತಿರುಗಾಟಕ್ಕೆ ಮಂಗಳವನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರನ್ನು ಮೇಳದ ಪ್ರಧಾನ ಸಂಚಾಲಕರಾದ ಪ್ರಮಲ್ ಕುಮಾರ್ ಕಾರ್ಕಳ ರವರ ನೇತೃತ್ವದಲ್ಲಿ ಗೌರವಿಸಲಾಯಿತು ಕ್ಷೇತ್ರದಲ್ಲಿ ನಡೆಯುತ್ತಿರುವ ದೇಯೀ ಬೈದೆತಿ ಆಯುರ್ವೇದ ಕೇಂದ್ರದ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದ್ದು ಕ್ಷೇತ್ರದ ಭಕ್ತರು ಹೆಚ್ಚಿನ ಧನಸಹಾಯವನ್ನು ನೀಡಬೇಕೆಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ಬಿರುವ ರವರು ಮನವಿ ಮಾಡಿದರು.

ರವಿ ಪೂಜಾರಿ ಚಿಲಿಂಬಿ ರವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯ ಸಭೆ ಜರಗಿದ್ದು ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ ಬಿ ಸ್ವಾಗತಿಸಿ ವರದಿಯನ್ನು ವಾಚಿಸಿದರು. ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಗೌರವ ಮಾರ್ಗದರ್ಶಕರಾಗಿ ಗುಜರಾತ್ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರೂ ಉದ್ಯಮಿಗಳೂ ಆಗಿರುವ ಶ್ರೀ ದಯಾನಂದ ಬೊಂಟ್ರಾ, ಹಾಗೂ ಮಹಾರಾಷ್ಟ್ರದ ನಾಸಿಕದ ಉದ್ಯಮಿಗಳಾಗಿರುವ ಶ್ರೀ ಗಂಗಾಧರ ಅಮೀನ್ ರವರನ್ನು ಗೌರವ ಮಾರ್ಗದರ್ಶಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಗಲ್ಫ್ ರಾಷ್ಟ್ರಗಳ ಸಂಚಾಲಕರೂ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ ಶ್ರೀ ಸತೀಶ್ ಪೂಜಾರಿ ಬೆಳಪು,ಶ್ರೀ ಉಲ್ಲಾಸ್ ಕೋಟ್ಯಾನ್, ಶ್ರೀ ದೀಪಕ್ ಕೋಟ್ಯಾನ್, ಶ್ರೀ ಹರೀಶ್ ಸಾಲಿಯಾನ್ ಬಜಗೋಳಿ, ಶ್ರೀ ಜಯಾನಂದ ಎಂ, ಶ್ರೀ ನಿತ್ಯಾನಂದ ನಾವರ, ಡಾ ಸಂತೋಷ್ ಕುಮಾರ್ ಬೈರಂಪಲ್ಲಿ, ಶ್ರೀ ನಾರಾಯಣ ಮಚ್ಚಿನ, ಶ್ರೀ ರಾಜೇಂದ್ರ ಚಿಲಿಂಬಿ, ಹರೀಶ್ ಪೂಜಾರಿ ಬೈಲಬರಿ, ಶ್ರೀ ನಾಗೇಶ್ ಪೂಜಾರಿ ಬೈಕಂಪಾಡಿ, ಶ್ರೀ ನವೀನ ಸುವರ್ಣ ಸಜೀಪ, ಶ್ರೀ ಜಯರಾಮ್ ಬೆಳುವಾಯಿ, ವಿಜಯ ಪೂಜಾರಿ ಸುರತ್ಕಲ್ ಹಾಗೂ ಗೆಜ್ಜೆ ಗಿರಿ ಮೇಳದ ಕಲಾವಿದರು ಹಾಜರಿದ್ದರು.

Related posts

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

Suddi Udaya

ಟೀಂ ಅಭಯಹಸ್ತ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ

Suddi Udaya

ವೈದ್ಯರ ನಿರ್ಲಕ್ಷ್ಯಕ್ಕೆ ವೇಣೂರಿನ ಗರ್ಭಿಣಿ ಮಹಿಳೆ ಕೋಮಸ್ಥಿತಿಯಲ್ಲಿ

Suddi Udaya

ನಡ: ಸ್ಟಾರ್ ಲೈನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ” ಫಿಟ್ ಫೆಸ್ಟ್ 2024 “

Suddi Udaya

ಬೆಳ್ತಂಗಡಿ ಮಹಿಳಾ ವೃಂದದಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಭಾರತೀಯ ಜೈನ್ ಮಿಲನ್ ವಲಯ-8: ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ ಉದ್ಘಾಟನೆ

Suddi Udaya
error: Content is protected !!