July 23, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ರೈತರ ನೂತನ ಕೋವಿ ಪರವಾನಿಗೆ ಪುನರಾರಂಭಿಸಿ: ಮೋಹನ್ ಗೌಡ ಕಲ್ಮಂಜ

ಬೆಳ್ತಂಗಡಿ: ದ.ಕ. ಜಿಲ್ಲೆಯ ಮಲೆನಾಡ ಪ್ರದೇಶದ ತಪ್ಪಲಿನಲ್ಲಿರುವ ಕುದುರೆಮುಖ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ ಸುಳ್ಯ-ಕಡಬ ಬೆಳ್ತಂಗಡಿ ತಾಲೂಕಿನ ರೈತರು ಆನೆ, ಚಿರತೆ, ಕಾಡುಹಂದಿ ಹಾವಳಿಯಿಂದ ತಮ್ಮ ಕೃಷಿಭೂಮಿಯನ್ನು ರಕ್ಷಿಸಲು ಆತ್ಮ ರಕ್ಷಣೆಗಾಗಿ ಈ ಹಿಂದೆ ನೀಡುತ್ತಿದ್ದ ರೈತರಿಗೆ ಕೋವಿ ಪರವಾನಿಗೆ ಇತ್ತೀಚಿನ ವರ್ಷದಲ್ಲಿ ಸ್ಥಗಿತಗೊಂಡಿದ್ದು, ಇದನ್ನು ಪುನಾರಂಭಿಸಬೇಕು ಎಂದು ದ.ಕ. ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸರಕಾರಕ್ಕೆ ಆಗ್ರಹ ಮಾಡಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಸರಕಾರ 2013ರ ಅವಧಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅವಧಿಯಲ್ಲಿ ಜಿಲ್ಲೆಯ ಅನೇಕ ರೈತರಿಗೆ ಕೋವಿ ಪರವಾನಿಗೆ ನೀಡಲಾಗಿತ್ತು. ಆದರೆ ನಂತರ ಬಂದ ಜಿಲ್ಲಾಧಿಕಾರಿಗಳು ನೂತನ ಪರವಾನಿಗೆ ಅರ್ಜಿಯನ್ನು ಮಾನ್ಯ ಮಾಡದೆ ಕಡತದಲ್ಲೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಂದು ಕಡೆ ಆನೆಗಳು ರೈತರ ಮನೆ ಅಂಗಳಕ್ಕೆ ಬರುತ್ತಿವೆ, ಇತ್ತೀಚೆಗೆ ಚಿರತೆಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ ಇವೆಲ್ಲದರ ಮಧ್ಯೆ ಕಾಡುಹಂದಿ ಇತ್ಯಾದಿಗಳ ಹಾವಳಿ ಮಧ್ಯೆ ರೈತರ ಕೃಷಿ ಜೀವನ ಸಾಗುತ್ತಿದೆ. ಪ್ರಾಣಿಗಳನ್ನು ಕೊಲ್ಲಲು ರೈತರು ಅವಕಾಶ ಕೊಡುತ್ತಿಲ್ಲ, ಬದಲಾಗಿ ಗ್ರಾಮೀಣ ಪ್ರದೇಶದ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ನಡೆದಾಡುವ ರಸ್ತೆಗಳಲ್ಲಿ ಮನೆಗಳ ಮಧ್ಯೆ ಪ್ರಾಣಿಗಳು ಸಂಚಾರ ಮಾಡುವ ಸಂದರ್ಭ ಕನಿಷ್ಠ ಪ್ರಾಣದ ರಕ್ಷಣೆಗಾಗಿ ಅವುಗಳನ್ನು ಬೆದರಿಸಲು ಆದರೂ ಅವಕಾಶ ನೀಡುವಂತೆ ಸರಕಾರ ಪುನರ್ ಚಿಂತಿಸಿ ರೈತರ ಹಿತದೃಷ್ಟಿಯಿಂದ ಕೋವಿ ಪರವಾನಿಗೆ ಪುನರಾರಂಭಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧಪಟ್ಟಂತೆ ನೂತನ ಅರಣ್ಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯ ಮಾಡಲಾಗುವುದು ಎಂದು ಮೋಹನ್ ಗೌಡ ತಿಳಿಸಿದ್ದಾರೆ.

Related posts

ಕಲ್ಮಂಜ : ಮದ್ಮಲ್‌ ಕಟ್ಟೆಯಲ್ಲಿ ನಿಲ್ಲಿಸಿದ ರೂ.65 ಸಾವಿರ ಮೌಲ್ಯದ ಮೋಟಾರ್‌ ಸೈಕಲ್‌ ಕಳವು

Suddi Udaya

ಗುರುವಾಯನಕೆರೆ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಪರ್ವ-2024′ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನದಲ್ಲಿ ಸರ್ವ ದೈವಾರಾಧಕರಿಗೆ ಸನ್ಮಾನ: ಸಂಪತ್ ಬಿ ಸುವರ್ಣ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ : ಉಜಿರೆ ಎಸ್ ಡಿ ಎಂ ಅನುದಾನಿತ ಸೆಕೆಂಡರಿ ಶಾಲೆ ಶೇ.99.34 ಫಲಿತಾಂಶ

Suddi Udaya

ಎಂ.ಎನ್. ರಾಜೇಂದ್ರ ಕುಮಾ‌ರ್ ರವರಿಗೆ ‘ಗ್ಲೋಬಲ್ ಅಚೀವರ್ಸ್‌’ ಪ್ರಶಸ್ತಿ

Suddi Udaya

ಬೆಳಾಲು: ಸ್ಕೂಟರ್‌ಗೆ ಕ್ರೇನ್ ಡಿಕ್ಕಿ ಹೊಡೆದು ಅಪಘಾತ-ಬಳಂಜ ಕಾಪಿನಡ್ಕ ನಿವಾಸಿ ಜಯ ಮೇಸ್ತ್ರೀ ಸ್ಥಳದಲ್ಲೇ ಸಾವು

Suddi Udaya

ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌‌ ವತಿಯಿಂದ ಕರಂಬಾರು ಸ. ಹಿ. ಪ್ರಾ. ಶಾಲೆಯಲ್ಲಿ ‘ಶಾಲೆಡೊಂಜಿ ದಿನ’

Suddi Udaya
error: Content is protected !!