ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿಯೆಂದು ಯುವ ನಾಯಕತ್ವಕ್ಕೆ ಸ್ಫೂರ್ತಿ ತುಂಬಿದ ನಾಯಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಮುಖ್ಯಮಂತ್ರಿಯಾದ ಕ್ಷಣ ನಿಜಕ್ಕೂ ರೋಮಾಂಚನ, ಸಂತಸ ತಂದಿದೆ.
ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿರುವ ತ್ಯಾಗ ಹೋರಾಟ, ಶ್ರಮಕ್ಕೆ ಇಂದು ಹೈಕಮಾಂಡ್ ಸೂಕ್ತ ಸ್ಥಾನ ಗೌರವ ನೀಡಿದೆ. ಖಂಡಿತ ಓರ್ವ ಪಕ್ಷದ ಸಾಮಾನ್ಯ ಕಾರ್ಯಕರ್ತ,ಯುವ ನಾಯಕ ಹೋರಾಟದಿಂದ ಬೆಳೆದರೆ ಡಿಕೆ ಶಿವಕುಮಾರ್ ರೀತಿ ಬೆಳೆಯಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ಸಾರಿದೆ.
ನೂತನ ಮುಖ್ಯ ಮಂತ್ರಿಗಳು ಯುವಕರ, ಕೃಷಿಕರ, ಮಧ್ಯಮ ವರ್ಗ, ಶ್ರಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಲಿದ್ದಾರೆ.ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಸಚಿವ ಗಂಗಾಧರ್ ಗೌಡರ ಆತ್ಮೀಯ ಒಡನಾಟ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹಾಗೂ ನನ್ನ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಕೂಡ ಅವರ ನೇತೃತ್ವ ಆಶೀರ್ವಾದದಿಂದಲೇ ಆಗಿರುವ ಕಾರಣ ನಮಗೆಲ್ಲರಿಗೂ ಅತ್ಯಂತ ಗೌರವ. ಒಕ್ಕಲಿಗ ಗೌಡ ಸಮಾಜದ ನಾಯಕ ಇಂದು ಮುಖ್ಯ ಮಂತ್ರಿ ಆಗಿರೋದು ನಮಗೆಲ್ಲ ಸಂತಸ ತಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ,ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಅಭಿಪ್ರಾಯ ವ್ಯಕ್ತಪಡಿಸಿದರು.












