22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡಂಗಡಿ ಓಡೀಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಚಿಕ್ಕಮೇಳ ತಿರುಗಾಟ ಆರಂಭ

ಪಡoಗಡಿ: ಕರಾವಳಿ ಕರ್ನಾಟಕದ ಹೆಮ್ಮೆಯ ಸಾಂಪ್ರದಾಯಿಕ ಕಲಾಪ್ರಕಾರವಾದ ಯಕ್ಷಗಾನವು ಸಾಮಾನ್ಯವಾಗಿ ದೀಪಾವಳಿಯ ಶುಭ ಮುಹೂರ್ತದಿಂದ ಆರಂಭಗೊಂಡು ಪತ್ತನಾಜೆಯವರೆಗೆ ಕರಾವಳಿಯಾದ್ಯಂತ ಅತ್ಯಂತ ವೈಭವದಿಂದ ಜರುಗುತ್ತದೆ. ಆದರೆ, ಮಳೆಗಾಲದ ದಿನಗಳಲ್ಲಿ ತಿರುಗಾಟವಿಲ್ಲದೆ ಕಲಾ ಸೇವೆಯಿಂದ ವಂಚಿತರಾಗುವ ಹಾಗೂ ಜೀವನೋಪಾಯಕ್ಕೆ ಸಂಕಷ್ಟ ಎದುರಿಸುವ ಯಕ್ಷಗಾನ ಕಲಾವಿದರ ನೆರವಿಗಾಗಿ ಮತ್ತು ಕಲೆಯ ನಿರಂತರತೆಗಾಗಿ ರೂಢಿಗೆ ಬಂದ ಅಪೂರ್ವ ಆಚರಣೆಯೇ ‘ಚಿಕ್ಕಮೇಳ’. ಇದರೊಂದಿಗೆ, ಸುತ್ತಮುತ್ತಲಿನ ಪರಿಸರದಲ್ಲಿ ಸುಳಿದಾಡುವ ಕಣ್ಣಿಗೆ ಕಾಣದ ಕ್ಷುದ್ರ ಹಾಗೂ ದುಷ್ಟ ಶಕ್ತಿಗಳು, ಯಕ್ಷಗಾನದ ಪವಿತ್ರ ಚೆಂಡೆ-ಮದ್ದಲೆಯ ಗಂಭೀರ ನಾದಕ್ಕೆ ಧಾವಿಸಿ ಓಡಿಹೋಗುತ್ತವೆ ಎನ್ನುವುದು ಸನಾತನ ಧರ್ಮದ ಅಚಲವಾದ ನಂಬಿಕೆಯಾಗಿದೆ.

ಈ ಪವಿತ್ರ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಓಡೀಲು ಶ್ರೀ ಮಹಾಲಿಂಗೇಶ್ವರ ಪ್ರಸಾದಿತ ಚಿಕ್ಕಮೇಳವು ಸನ್ನಿಧಾನದಲ್ಲಿ ಜೂ 5 ರoದು ಅತ್ಯಂತ ಭಕ್ತಿ-ಶ್ರದ್ಧೆಗಳೊಂದಿಗೆ ಕ್ಷೇತ್ರದ ಪ್ರಧಾನ ಅರ್ಚಕರಾದ ರಘುರಾಮ್ ಭಟ್ ಮಠ ಅವರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಮನೆಮನೆಗಳಿಗೆ ಕಲಾ ದೇವತೆಯ ಪ್ರಸಾದ ರೂಪದಲ್ಲಿ ತೆರಳಿ, ಭಕ್ತರ ಮನೆಬಾಗಿಲಲ್ಲಿ ಕಲೆಯ ಪ್ರದರ್ಶನವನ್ನು ನೀಡಲು ಕಲಾವಿದರು ಸಜ್ಜಾಗಿದ್ದಾರೆ.

ಖ್ಯಾತ ಯಕ್ಷಗಾನ ಕಲಾವಿದರಾದ ಕುಸುಮೋಧರ್ ಅವರ ಸಮರ್ಥ ನೇತೃತ್ವದಲ್ಲಿ ಈ ಚಿಕ್ಕಮೇಳವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿದೆ.
​ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು, ಸಮಿತಿಯ ಸದಸ್ಯರಾದ ಶ್ರೀಮತಿ ಶಾಂಭವಿ ಪಿ. ಬಂಗೇರ ಬೆಳ್ತಂಗಡಿ .ಶ್ರೀ ಸತೀಶ್ ಬಂಗೇರ ಕುವೆಟ್ಟು, ಭಜನಾ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕಿನ್ನಿಗೋಳಿ. ರಾಘವೇಂದ್ರ ಭಟ್ ಮಠ. ಕ್ರಷ್ಣ ಭಟ್ ನೇರಳಕಟ್ಟೆ. ಅನoತ ಎಸ್ ಇರ್ವತ್ರಾಯ. ತoಗೊಯಿ. ರಾಘವ ಪೂಜಾರಿ ನಾಳ. ಚoದ್ರಹಾಸ್ ಕೇದೆ. ನಾರಾಯಣ ಶೆಟ್ಟಿ ಪುರಿಪಟ್ಟ. ದಾಮೋದರ ಕುoದರ್ ಸಬರಬೈಲು. ಉಮೇಶ್ ಕುಮಾರ್. ಸದಾಶಿವ .ಸೇರಿದಂತೆ ಕಲಾಭಿಮಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದು ಕಲಾವಿದರನ್ನು ಹರಸಿ ಪ್ರೋತ್ಸಾಹಿಸಿದರು.

Related posts

ಜು.1ರಿಂದ ಪದ್ಯಾಣ ಭಾಗವತ ಸಂಸ್ಮರಣೆ, ತಾಳಮದ್ದಳೆ ಸಪ್ತಾಹ: ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪದ್ಯಾಣ ಪ್ರಶಸ್ತಿ ಹಾಗೂ ಹಿಮ್ಮೇಳ ವಾದಕ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ಪ್ರಶಸ್ತಿ,

Suddi Udaya

ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ಮಂಗಳೂರು – ಧರ್ಮಸ್ಥಳ: ರಾಜಹಂಸ ಬಸ್ ಸೇವೆ ಪ್ರಾರಂಭ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

Suddi Udaya

ದ್ವಿತೀಯ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಅನನ್ಯ ರಿಗೆ ಜೆಸಿಐ ಕೊಕ್ಕಡ ಕಪಿಲ ಘಟಕದಿಂದ ಸನ್ಮಾನ

Suddi Udaya

ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!