September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡಂಗಡಿ ಓಡೀಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಚಿಕ್ಕಮೇಳ ತಿರುಗಾಟ ಆರಂಭ

ಪಡoಗಡಿ: ಕರಾವಳಿ ಕರ್ನಾಟಕದ ಹೆಮ್ಮೆಯ ಸಾಂಪ್ರದಾಯಿಕ ಕಲಾಪ್ರಕಾರವಾದ ಯಕ್ಷಗಾನವು ಸಾಮಾನ್ಯವಾಗಿ ದೀಪಾವಳಿಯ ಶುಭ ಮುಹೂರ್ತದಿಂದ ಆರಂಭಗೊಂಡು ಪತ್ತನಾಜೆಯವರೆಗೆ ಕರಾವಳಿಯಾದ್ಯಂತ ಅತ್ಯಂತ ವೈಭವದಿಂದ ಜರುಗುತ್ತದೆ. ಆದರೆ, ಮಳೆಗಾಲದ ದಿನಗಳಲ್ಲಿ ತಿರುಗಾಟವಿಲ್ಲದೆ ಕಲಾ ಸೇವೆಯಿಂದ ವಂಚಿತರಾಗುವ ಹಾಗೂ ಜೀವನೋಪಾಯಕ್ಕೆ ಸಂಕಷ್ಟ ಎದುರಿಸುವ ಯಕ್ಷಗಾನ ಕಲಾವಿದರ ನೆರವಿಗಾಗಿ ಮತ್ತು ಕಲೆಯ ನಿರಂತರತೆಗಾಗಿ ರೂಢಿಗೆ ಬಂದ ಅಪೂರ್ವ ಆಚರಣೆಯೇ ‘ಚಿಕ್ಕಮೇಳ’. ಇದರೊಂದಿಗೆ, ಸುತ್ತಮುತ್ತಲಿನ ಪರಿಸರದಲ್ಲಿ ಸುಳಿದಾಡುವ ಕಣ್ಣಿಗೆ ಕಾಣದ ಕ್ಷುದ್ರ ಹಾಗೂ ದುಷ್ಟ ಶಕ್ತಿಗಳು, ಯಕ್ಷಗಾನದ ಪವಿತ್ರ ಚೆಂಡೆ-ಮದ್ದಲೆಯ ಗಂಭೀರ ನಾದಕ್ಕೆ ಧಾವಿಸಿ ಓಡಿಹೋಗುತ್ತವೆ ಎನ್ನುವುದು ಸನಾತನ ಧರ್ಮದ ಅಚಲವಾದ ನಂಬಿಕೆಯಾಗಿದೆ.

ಈ ಪವಿತ್ರ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಓಡೀಲು ಶ್ರೀ ಮಹಾಲಿಂಗೇಶ್ವರ ಪ್ರಸಾದಿತ ಚಿಕ್ಕಮೇಳವು ಸನ್ನಿಧಾನದಲ್ಲಿ ಜೂ 5 ರoದು ಅತ್ಯಂತ ಭಕ್ತಿ-ಶ್ರದ್ಧೆಗಳೊಂದಿಗೆ ಕ್ಷೇತ್ರದ ಪ್ರಧಾನ ಅರ್ಚಕರಾದ ರಘುರಾಮ್ ಭಟ್ ಮಠ ಅವರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಮನೆಮನೆಗಳಿಗೆ ಕಲಾ ದೇವತೆಯ ಪ್ರಸಾದ ರೂಪದಲ್ಲಿ ತೆರಳಿ, ಭಕ್ತರ ಮನೆಬಾಗಿಲಲ್ಲಿ ಕಲೆಯ ಪ್ರದರ್ಶನವನ್ನು ನೀಡಲು ಕಲಾವಿದರು ಸಜ್ಜಾಗಿದ್ದಾರೆ.

ಖ್ಯಾತ ಯಕ್ಷಗಾನ ಕಲಾವಿದರಾದ ಕುಸುಮೋಧರ್ ಅವರ ಸಮರ್ಥ ನೇತೃತ್ವದಲ್ಲಿ ಈ ಚಿಕ್ಕಮೇಳವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿದೆ.
​ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು, ಸಮಿತಿಯ ಸದಸ್ಯರಾದ ಶ್ರೀಮತಿ ಶಾಂಭವಿ ಪಿ. ಬಂಗೇರ ಬೆಳ್ತಂಗಡಿ .ಶ್ರೀ ಸತೀಶ್ ಬಂಗೇರ ಕುವೆಟ್ಟು, ಭಜನಾ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕಿನ್ನಿಗೋಳಿ. ರಾಘವೇಂದ್ರ ಭಟ್ ಮಠ. ಕ್ರಷ್ಣ ಭಟ್ ನೇರಳಕಟ್ಟೆ. ಅನoತ ಎಸ್ ಇರ್ವತ್ರಾಯ. ತoಗೊಯಿ. ರಾಘವ ಪೂಜಾರಿ ನಾಳ. ಚoದ್ರಹಾಸ್ ಕೇದೆ. ನಾರಾಯಣ ಶೆಟ್ಟಿ ಪುರಿಪಟ್ಟ. ದಾಮೋದರ ಕುoದರ್ ಸಬರಬೈಲು. ಉಮೇಶ್ ಕುಮಾರ್. ಸದಾಶಿವ .ಸೇರಿದಂತೆ ಕಲಾಭಿಮಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದು ಕಲಾವಿದರನ್ನು ಹರಸಿ ಪ್ರೋತ್ಸಾಹಿಸಿದರು.

Related posts

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಡಾನೆ ನಿರಂತರ

Suddi Udaya

ಬೆಳ್ತಂಗಡಿ ಪ್ರಾ.ಸ. ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಗೆ ಸಂಜೀವ ಪೂಜಾರಿ ನಾಮನಿರ್ದೇಶನ

Suddi Udaya

ಚಾರ್ಮಾಡಿ : ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಜನರ ಪ್ರತಿಭಟನೆ

Suddi Udaya

ಕಾಲ್ತುಳಿತ ದುರಂತ: ಪೂರ್ವ ತಯಾರಿ ಇಲ್ಲದೆ ರಾಜ್ಯ ಸರ್ಕಾದಿಂದ ಬೇಜವಾಬ್ದಾರಿ ಸಂಭ್ರಮಾಚರಣೆ: ಹರೀಶ್ ಪೂಂಜ

Suddi Udaya

ಬೆಂಗಳೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ತೋಟತ್ತಾಡಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ವೇಣೂರು ಕುಂಭಶ್ರೀ ಶಾಲೆಯಲ್ಲಿ ಮಾತಾ-ಪಿತಾ-ಗುರುದೇವೋಭವ ಕಾರ್ಯಕ್ರಮ

Suddi Udaya
error: Content is protected !!