July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡಂಗಡಿ ಓಡೀಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಚಿಕ್ಕಮೇಳ ತಿರುಗಾಟ ಆರಂಭ

ಪಡoಗಡಿ: ಕರಾವಳಿ ಕರ್ನಾಟಕದ ಹೆಮ್ಮೆಯ ಸಾಂಪ್ರದಾಯಿಕ ಕಲಾಪ್ರಕಾರವಾದ ಯಕ್ಷಗಾನವು ಸಾಮಾನ್ಯವಾಗಿ ದೀಪಾವಳಿಯ ಶುಭ ಮುಹೂರ್ತದಿಂದ ಆರಂಭಗೊಂಡು ಪತ್ತನಾಜೆಯವರೆಗೆ ಕರಾವಳಿಯಾದ್ಯಂತ ಅತ್ಯಂತ ವೈಭವದಿಂದ ಜರುಗುತ್ತದೆ. ಆದರೆ, ಮಳೆಗಾಲದ ದಿನಗಳಲ್ಲಿ ತಿರುಗಾಟವಿಲ್ಲದೆ ಕಲಾ ಸೇವೆಯಿಂದ ವಂಚಿತರಾಗುವ ಹಾಗೂ ಜೀವನೋಪಾಯಕ್ಕೆ ಸಂಕಷ್ಟ ಎದುರಿಸುವ ಯಕ್ಷಗಾನ ಕಲಾವಿದರ ನೆರವಿಗಾಗಿ ಮತ್ತು ಕಲೆಯ ನಿರಂತರತೆಗಾಗಿ ರೂಢಿಗೆ ಬಂದ ಅಪೂರ್ವ ಆಚರಣೆಯೇ ‘ಚಿಕ್ಕಮೇಳ’. ಇದರೊಂದಿಗೆ, ಸುತ್ತಮುತ್ತಲಿನ ಪರಿಸರದಲ್ಲಿ ಸುಳಿದಾಡುವ ಕಣ್ಣಿಗೆ ಕಾಣದ ಕ್ಷುದ್ರ ಹಾಗೂ ದುಷ್ಟ ಶಕ್ತಿಗಳು, ಯಕ್ಷಗಾನದ ಪವಿತ್ರ ಚೆಂಡೆ-ಮದ್ದಲೆಯ ಗಂಭೀರ ನಾದಕ್ಕೆ ಧಾವಿಸಿ ಓಡಿಹೋಗುತ್ತವೆ ಎನ್ನುವುದು ಸನಾತನ ಧರ್ಮದ ಅಚಲವಾದ ನಂಬಿಕೆಯಾಗಿದೆ.

ಈ ಪವಿತ್ರ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಓಡೀಲು ಶ್ರೀ ಮಹಾಲಿಂಗೇಶ್ವರ ಪ್ರಸಾದಿತ ಚಿಕ್ಕಮೇಳವು ಸನ್ನಿಧಾನದಲ್ಲಿ ಜೂ 5 ರoದು ಅತ್ಯಂತ ಭಕ್ತಿ-ಶ್ರದ್ಧೆಗಳೊಂದಿಗೆ ಕ್ಷೇತ್ರದ ಪ್ರಧಾನ ಅರ್ಚಕರಾದ ರಘುರಾಮ್ ಭಟ್ ಮಠ ಅವರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಮನೆಮನೆಗಳಿಗೆ ಕಲಾ ದೇವತೆಯ ಪ್ರಸಾದ ರೂಪದಲ್ಲಿ ತೆರಳಿ, ಭಕ್ತರ ಮನೆಬಾಗಿಲಲ್ಲಿ ಕಲೆಯ ಪ್ರದರ್ಶನವನ್ನು ನೀಡಲು ಕಲಾವಿದರು ಸಜ್ಜಾಗಿದ್ದಾರೆ.

ಖ್ಯಾತ ಯಕ್ಷಗಾನ ಕಲಾವಿದರಾದ ಕುಸುಮೋಧರ್ ಅವರ ಸಮರ್ಥ ನೇತೃತ್ವದಲ್ಲಿ ಈ ಚಿಕ್ಕಮೇಳವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿದೆ.
​ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು, ಸಮಿತಿಯ ಸದಸ್ಯರಾದ ಶ್ರೀಮತಿ ಶಾಂಭವಿ ಪಿ. ಬಂಗೇರ ಬೆಳ್ತಂಗಡಿ .ಶ್ರೀ ಸತೀಶ್ ಬಂಗೇರ ಕುವೆಟ್ಟು, ಭಜನಾ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕಿನ್ನಿಗೋಳಿ. ರಾಘವೇಂದ್ರ ಭಟ್ ಮಠ. ಕ್ರಷ್ಣ ಭಟ್ ನೇರಳಕಟ್ಟೆ. ಅನoತ ಎಸ್ ಇರ್ವತ್ರಾಯ. ತoಗೊಯಿ. ರಾಘವ ಪೂಜಾರಿ ನಾಳ. ಚoದ್ರಹಾಸ್ ಕೇದೆ. ನಾರಾಯಣ ಶೆಟ್ಟಿ ಪುರಿಪಟ್ಟ. ದಾಮೋದರ ಕುoದರ್ ಸಬರಬೈಲು. ಉಮೇಶ್ ಕುಮಾರ್. ಸದಾಶಿವ .ಸೇರಿದಂತೆ ಕಲಾಭಿಮಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದು ಕಲಾವಿದರನ್ನು ಹರಸಿ ಪ್ರೋತ್ಸಾಹಿಸಿದರು.

Related posts

ವಲಯ ಸಮ್ಮೇಳನದಲ್ಲಿ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ ಸಮಗ್ರ ಪ್ರಶಸ್ತಿ

Suddi Udaya

ಸವಣಾಲು ಅ.ಹಿ.ಪ್ರಾ. ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನ ಆಚರಣೆ

Suddi Udaya

ತೆಂಕಕಾರಂದೂರು ಪಳಿಕೆ ಲೀಲಾವತಿ ಶೆಟ್ಟಿ ನಿಧನ

Suddi Udaya

ಹಿಂದೂ ಸಂಗಮ ಆಯೋಜನಾ ಸಮಿತಿ ಉರುವಾಲು, ಕಣಿಯೂರು, ಬಂದಾರು ಗ್ರಾಮಗಳನ್ನೊಳಗೊಂಡ ಬಂದಾರು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಸಂದೇಶ್ ಮದ್ದಡ್ಕ ಇವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ

Suddi Udaya

ಮಾಲಾಡಿ: ಪುರಿಯ-ಕುರಿಯೋಡಿರಸ್ತೆ ಕಾಮಗಾರಿ ಸ್ಥಳಾಂತರಕ್ಕೆ ವಿರೋಧ: ಶೀಘ್ರ ಕಾಮಗಾರಿಗೆ ನಾಗರಿಕರ ಒತ್ತಾಯ

Suddi Udaya
error: Content is protected !!