23.6 C
ಪುತ್ತೂರು, ಬೆಳ್ತಂಗಡಿ
June 8, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಅಕ್ರಮ ಮರಳು ದಾಸ್ತಾನು ಅಡ್ಡೆ ಪತ್ತೆಹಚ್ಚಿದ ವೇಣೂರು ಪೊಲೀಸರು

ಬೆಳ್ತಂಗಡಿ : ವೇಣೂರು ಠಾಣಾ ವ್ಯಾಪ್ತಿಯ ಆರಂಬೋಡಿ ನಿಡ್ಯಾಲಬೆಟ್ಟು ಎಂಬಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ಸುಮಾರು 12 ಟಿಪ್ಪರ್ ನಷ್ಟು ಮರಳನ್ನು ವೇಣೂರು ಪೊಲೀಸರು ಪತ್ತೆಹಚ್ಚಿದ್ದು ಪ್ರಕರಣ‌ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಸುಂದರ ಪೂಜಾರಿ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ನೇತೃತ್ವದ ತಂಡ ಜೂನ್.5 ರಂದು ದಾಳಿ ನಡೆಸಿದ್ದು ಅವರನ್ನು ವಿಚಾರಿಸಿದಾಗ ಮರಳನ್ನು ಸ್ಥಳೀಯರಾದ ದಿನೇಶ್ ಕುಲಾಲ್ ಎಂಬವರು ತಮ್ಮ ಟಿಪ್ಪರ್ KA-19-AA-3213 ರಲ್ಲಿ ಅಂಗರಕರಿಯದ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಮರಳನ್ನು ತಂದು ತನ್ನ ಜಾಗದಲ್ಲಿ ದಾಸ್ತಾನು ಇರಿಸಿರುವುದಾಗಿ ಇದನ್ನು ಮಾರಾಟಮಾಡಿ ಹಣ ಗಳಿಸುವ ಉದ್ದೇಶದಿಂದ ಮರಳನ್ನು ಶೇಖರಿಸಿರುವುದಾಗಿ ತಿಳಿಸಿದ್ದು ಅದರಂತೆ ವೇಣೂರು ಮರಳನ್ನು ಮುಟ್ಟುಗೋಲು ಹಾಕಿದ್ದಾರೆ.

ಮರಳಿನ ಅಂದಾಜು ಮೌಲ್ಯ ರೂ 90 ಸಾವಿರ ಎಂದು ಅಂದಾಜಿಸಲಾಗಿದೆ ವೇಣೂರು ಠಾಣೆಯಲ್ಲಿ ಕಲಂ: Us 303(2) BNS ಮತ್ತು ಕಲಂ: 42 ̧ 43 ̧ 44 KARNATAKA MINOR MINERAL CONSISTENT RULE 1994 ಮತ್ತು ಕಲಂ: 4(1),4(1A),21(1) (1A) MMRD Act 1957 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ನಿಡ್ಲೆ: ಕುದ್ರಾಯದ ಕಿಂಡಿ ಅಣೆಕಟ್ಟಿನ ಮೇಲಿನ ಭಾಗದ ಮರಗಳ ತೆರವು

Suddi Udaya

ಉಜಿರೆ: ಮೌಲ್ಯ ನಾಯಕ್ ರವರಿಗೆ ಸ್ವರ್ಣಪದಕ ಹಸ್ತಾಂತರ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ವಿರುದ್ಧ ಕೇಸು ದಾಖಲು: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡನೆ

Suddi Udaya

ಉಜಿರೆಯ ವಿಶೇಷ ಮಕ್ಕಳ ಸಾನಿಧ್ಯ ಕೇಂದ್ರದಲ್ಲಿ ದೀಪಾವಳಿ ಸಂಭ್ರಮ

Suddi Udaya

ಧರ್ಮಸ್ಥಳ “ಹೆಜ್ಜೆ ಗುರುತು” ತಂಡದಿಂದ ಶ್ರಮದಾನ

Suddi Udaya

ಪಿಯುಸಿ ಫಲಿತಾಂಶ: ಶ್ರೀದೇವಿ ಕಲಾ ವಿಭಾಗದಲ್ಲಿ ವಾಣಿ ಕಾಲೇಜಿಗೆ ಪ್ರಥಮ

Suddi Udaya
error: Content is protected !!