23.8 C
ಪುತ್ತೂರು, ಬೆಳ್ತಂಗಡಿ
July 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುತ್ತಿಲ ಕಲಾಯ ಗುತ್ತುವಿನಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ ಮತ್ತು ಪುಸ್ತಕ ಪ್ರಸ್ತುತಿ ಹಾಗೂ ಸಾವಿರದ ಸಾಧಕರು ಕಾರ್ಯಕ್ರಮ

ಪುತ್ತಿಲ: ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ, ಬೆಳ್ತಂಗಡಿ ತಾಲೂಕು ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿ ಇದರ ಆಶ್ರಯದಲ್ಲಿ 200 ವರ್ಷಗಳಷ್ಟು ಹಳೆಯ ಪ್ರಸಿದ್ಧ ಗುತ್ತಿನ ಮನೆ ‘ಕಲಾಯ ಗುತ್ತು ‘ ಪುತ್ತಿಲದಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ ಮತ್ತು ಪುಸ್ತಕ ಪ್ರಸ್ತುತಿ ಸಮಾರಂಭ ಹಾಗೂ ಸಾವಿರದ ಸಾಧಕರು ಕಾರ್ಯಕ್ರಮದಲ್ಲಿ ಏಳು ಮಂದಿ ಮೌನ ಸಾಧಕರಿಗೆ ಮನೆ -ಮನದ ಸಮ್ಮಾನದ ಹೃದಯಸ್ಪರ್ಶಿ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಸಂಸ್ಮರಣಾ ಸಮಿತಿಯ ಅಧ್ಯಕ್ಷ ಸಂಪತ್ ಬಿ ಸುವರ್ಣರವರು ಮಂಜ ಬೈದ್ಯರ ಹೋರಾಟ, ಬಲಿದಾನದ ತ್ಯಾಗವನ್ನು ನೆನೆದು, ಅವರ ಪ್ರತಿಮೆ ಅನಾವರಣ ಆಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಮಂಜ ಬೈದ್ಯರ ಕುರಿತಾಗಿ ಹೊರತಂದ ಪುಸ್ತಕವನ್ನು ಸಭೆಗೆ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಮೌನ ಸಾಧಕರಾದ ಬಾಲಕೃಷ್ಣ ಶೆಟ್ಟಿ ಕುಂಡಡ್ಕ (ಸಮಾಜಸೇವೆ), ಶ್ರೀಮತಿ ವಿನೋದ ಪ್ರವೀಣ್ ಪೂಜಾರಿ ಕರ್ಲ (ನಾಟಿವೈದ್ಯೆ ), ಶಿವಪ್ಪ ಪರವ (ದೈವ ನರ್ತಕರು), ಚಿದಾನಂದ ಪೂಜಾರಿ ಕಲಾಯಗುತ್ತು ಮನೆ
ಯಜಮಾನ), ಸುರೇಶ್ ಪೂಜಾರಿ ಕಲಾಯ ( ಅಧ್ಯಕ್ಷರು, ವಿಘ್ನೇಶ್ವರ ಭಜನಾ ಮಂಡಳಿ,ಪುತ್ತಿಲ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ಮಾಜಿ ಅಧ್ಯಕ್ಷ ಪ್ರಸನ್ನ ಗೌಡ, ಸಂಜೀವ ಪೂಜಾರಿ ಕಲಾಯ , ವಿಶ್ವನಾಥ್ ಪೂಜಾರಿ ಕೇರ್ಯ ಗುತ್ತು, ವಿಶ್ವನಾಥ್ ಪೂಜಾರಿ ಕಲಾಯ , ನಾಣ್ಯಪ್ಪ ಪೂಜಾರಿ ಕಲಾಯ, ಉಮೇಶ್ ಪೂಜಾರಿ ಕಲಾಯ, ಸುರೇಶ್ ಕಲಾಯ , ಪಾರ್ಶ್ವನಾಥ ಪೂಜಾರಿ ಕಲಾಯ, ಪ್ರಭಾಕರ್ ಪೂಜಾರಿ ಕಲಾಯ ಗಣೇಶ ಪೂಜಾರಿ ಬೆದ್ರಾಡಿ ಮತ್ತು ಕಲಾಯಗುತ್ತಿನ ಕುಟುಂಬದವರು ಉಪಸ್ಥಿತರಿದ್ದರು. ವಿಕೇಶ ಮಾನ್ಯ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಸತೀಶ್ ಪೂಜಾರಿ ಕಲಾಯ ಗುತ್ತು ,ರೋಹಿತ್ ಕಲಾಯ ಸಹಕರಿಸಿದ್ಧರು.
ತಾಲೂಕು ಸಮಿತಿ ಸಂಚಾಲಕರಾದ ಶಶಿಧರ ಕಲ್ಮoಜ, ಬಾಲಕೃಷ್ಣ ಶೆಟ್ಟಿ ಉಜಿರೆ, ವಿಶ್ವನಾಥ ಪೂಜಾರಿ ಮಡoತ್ಯಾರು ಉಪಸ್ಥಿತರಿದ್ದರು.

Related posts

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ ಬೆನ್ನಿದ ನಿರೆಲ್ದ ಬಿರ್ದ್ ಇದರ ಛಾಯಾಚಿತ್ರ ಹಾಗೂ ವೀಡಿಯೋ ಸ್ಪರ್ಧೆ: ಬೆಳ್ತಂಗಡಿ ವಲಯ ಪ್ರಥಮ ಸ್ಥಾನ

Suddi Udaya

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಪುತ್ತೂರು ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಂದ ಪೂಜಾರ್ಪಣೆ

Suddi Udaya

ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ರೇಷ್ಮಾ ಕೆ.ಎಸ್ ರವರಿಗೆ ‘ರಾಜ್ಯ ಮಟ್ಟದ ವಿದ್ಯಾರತ್ನ ಪ್ರಶಸ್ತಿ’ ಪ್ರದಾನ

Suddi Udaya

ನಾವರ: ಮನೆಯೊಳಗೆ ಅವಿತುಕೊಂಡಿದ್ದ ಕಾಳಿಂಗ ಸರ್ಪ, ಭಯಭೀತರಾದ ಕುಟುಂಬ: ಸ್ನೇಕ್ ಅಶೋಕ್ ಲಾಯಿಲರವರಿಂದ ಯಶಸ್ವಿ ಕಾರ್ಯಾಚರಣೆ

Suddi Udaya

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿರುದ್ದದ ಪ್ರಕರಣ ಹೈಕೋರ್ಟ್‌ನಲ್ಲಿ ವಜಾ

Suddi Udaya

ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಡಾ. ಶ್ಯಾಮ್ ಪ್ರಸಾದ ಮುಖರ್ಜಿ ಯವರ ಪುಣ್ಯಸ್ಮರಣೆ

Suddi Udaya
error: Content is protected !!