ಬೆಳ್ತಂಗಡಿ: ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು 12 ವರ್ಷಗಳನ್ನು ಪೂರ್ಣಗೊಳಿಸಿರುವ ಈ ಸಂದರ್ಭದಲ್ಲಿ, ಭಾರತವು ರಾಷ್ಟ್ರೀಯ ಚಿಂತನೆ, ಅಭಿವೃದ್ಧಿಯ ವೇಗ ಮತ್ತು ಜಾಗತಿಕ ಗೌರವದ ಹೊಸ ಎತ್ತರವನ್ನು ತಲುಪಿದೆ.
ಒಬ್ಬ ವಕೀಲನಾಗಿ ಸುಶಾಸನ ಮತ್ತು ಪಾರದರ್ಶಕ ಆಡಳಿತವನ್ನು, ಒಬ್ಬ ಕಾರ್ಮಿಕ ನಾಯಕನಾಗಿ ಶ್ರಮಜೀವಿಗಳ ಗೌರವ ಮತ್ತು ಅಭಿವೃದ್ಧಿಯನ್ನು, ಒಬ್ಬ ರಾಷ್ಟ್ರೀಯವಾದಿಯಾಗಿ ಭಾರತದ ಆತ್ಮನಿರ್ಭರತೆ, ಭದ್ರತೆ ಮತ್ತು ವಿಶ್ವಮಟ್ಟದ ಪ್ರಭಾವವನ್ನು ನಾನು ಮಹತ್ವದ ಸಾಧನೆಗಳಾಗಿ ಕಾಣುತ್ತೇನೆ.
ಇಂದು ದೇಶಕ್ಕೆ ಅಗತ್ಯವಿರುವುದು ವ್ಯಕ್ತಿಪೂಜೆ ಅಲ್ಲ, ರಾಷ್ಟ್ರಪೂಜೆ; ಪಕ್ಷನಿಷ್ಠೆ ಅಲ್ಲ, ರಾಷ್ಟ್ರನಿಷ್ಠೆ. ಬಲಿಷ್ಠ, ಸ್ವಾವಲಂಬಿ ಮತ್ತು ಸಮೃದ್ಧ ಭಾರತ ನಿರ್ಮಾಣವು ಸರ್ಕಾರದಷ್ಟೇ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
ಕಳೆದ 12 ವರ್ಷಗಳು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ್ದರೆ, ಮುಂದಿನ 25 ವರ್ಷಗಳು ಭಾರತದ ಶತಮಾನವನ್ನು ನಿರ್ಮಿಸಲಿವೆ. ಅಭಿವೃದ್ಧಿ, ಆತ್ಮವಿಶ್ವಾಸ ಮತ್ತು ರಾಷ್ಟ್ರಹಿತದ ಈ ಪಯಣ ಇನ್ನಷ್ಟು ವೇಗ ಪಡೆಯಲಿ ಎಂಬುದು ನನ್ನ ಆಶಯ ಎಂದು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ, ವಕೀಲರು ಅನಿಲ್ ಕುಮಾರ್ ಯು ತಿಳಿಸಿದರು.













