23.8 C
ಪುತ್ತೂರು, ಬೆಳ್ತಂಗಡಿ
July 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

12 ವರ್ಷಗಳ ಮೋದಿ ನೇತೃತ್ವ – ಹೊಸ ಭಾರತದ ಆತ್ಮವಿಶ್ವಾಸದ ಪಯಣ: ಅನಿಲ್ ಕುಮಾರ್ ಯು

ಬೆಳ್ತಂಗಡಿ: ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು 12 ವರ್ಷಗಳನ್ನು ಪೂರ್ಣಗೊಳಿಸಿರುವ ಈ ಸಂದರ್ಭದಲ್ಲಿ, ಭಾರತವು ರಾಷ್ಟ್ರೀಯ ಚಿಂತನೆ, ಅಭಿವೃದ್ಧಿಯ ವೇಗ ಮತ್ತು ಜಾಗತಿಕ ಗೌರವದ ಹೊಸ ಎತ್ತರವನ್ನು ತಲುಪಿದೆ.

ಒಬ್ಬ ವಕೀಲನಾಗಿ ಸುಶಾಸನ ಮತ್ತು ಪಾರದರ್ಶಕ ಆಡಳಿತವನ್ನು, ಒಬ್ಬ ಕಾರ್ಮಿಕ ನಾಯಕನಾಗಿ ಶ್ರಮಜೀವಿಗಳ ಗೌರವ ಮತ್ತು ಅಭಿವೃದ್ಧಿಯನ್ನು, ಒಬ್ಬ ರಾಷ್ಟ್ರೀಯವಾದಿಯಾಗಿ ಭಾರತದ ಆತ್ಮನಿರ್ಭರತೆ, ಭದ್ರತೆ ಮತ್ತು ವಿಶ್ವಮಟ್ಟದ ಪ್ರಭಾವವನ್ನು ನಾನು ಮಹತ್ವದ ಸಾಧನೆಗಳಾಗಿ ಕಾಣುತ್ತೇನೆ.

ಇಂದು ದೇಶಕ್ಕೆ ಅಗತ್ಯವಿರುವುದು ವ್ಯಕ್ತಿಪೂಜೆ ಅಲ್ಲ, ರಾಷ್ಟ್ರಪೂಜೆ; ಪಕ್ಷನಿಷ್ಠೆ ಅಲ್ಲ, ರಾಷ್ಟ್ರನಿಷ್ಠೆ. ಬಲಿಷ್ಠ, ಸ್ವಾವಲಂಬಿ ಮತ್ತು ಸಮೃದ್ಧ ಭಾರತ ನಿರ್ಮಾಣವು ಸರ್ಕಾರದಷ್ಟೇ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.

ಕಳೆದ 12 ವರ್ಷಗಳು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ್ದರೆ, ಮುಂದಿನ 25 ವರ್ಷಗಳು ಭಾರತದ ಶತಮಾನವನ್ನು ನಿರ್ಮಿಸಲಿವೆ. ಅಭಿವೃದ್ಧಿ, ಆತ್ಮವಿಶ್ವಾಸ ಮತ್ತು ರಾಷ್ಟ್ರಹಿತದ ಈ ಪಯಣ ಇನ್ನಷ್ಟು ವೇಗ ಪಡೆಯಲಿ ಎಂಬುದು ನನ್ನ ಆಶಯ ಎಂದು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ, ವಕೀಲರು ಅನಿಲ್ ಕುಮಾರ್ ಯು ತಿಳಿಸಿದರು.

Related posts

ಉಜಿರೆ ಎಸ್.ಡಿ.ಎಂ. ಸೆಕೆಂಡರಿ ಶಾಲೆಯಲ್ಲಿ ಜಿಲ್ಲಾಮಟ್ಟದ ನೆಟ್‌ಬಾಲ್ ಟೂರ್ನಿ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ಸಂಸ್ಥೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ಹರಿಪ್ರಸಾದ್ ಹೊಸಂಗಡಿ ಅವರಿಗೆ ತಾಲೂಕು ಯುವಜನ ಒಕ್ಕೂಟದಿಂದ ಶ್ರದ್ಧಾಂಜಲಿ

Suddi Udaya

ಮಡಂತ್ಯಾರು ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮೋತ್ಸವ

Suddi Udaya

ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸಭೆ

Suddi Udaya

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ವಾಣಿಜ್ಯ ವ್ಯವಹಾರಗಳ ಅಧ್ಯಯನದಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!