30.8 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜೂ. 19-20: ಬೆಂಗಳೂರು ಬಸವ ಅಕ್ಯೂ ಅಕಾಡೆಮಿ ವತಿಯಿಂದ ಸಿಂಗಲ್ ಪಾಯಿಂಟ್, ಅಕ್ಯೂಪ್ರೆಜರ್ ಮತ್ತು ಮರ್ಮ ಚಿಕಿತ್ಸಾ ಕಾರ್ಯಾಗಾರ

ಬೆಂಗಳೂರು: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಎರಡು ದಿನಗಳ ಸಿಂಗಲ್ ಪಾಯಿಂಟ್, ಅಕ್ಯೂಪ್ರೆಜರ್ ಮತ್ತು ಮರ್ಮ ಚಿಕಿತ್ಸಾ ಕಾರ್ಯಗಾರ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ ಎಂದು ಬಸವ ಅಕ್ಯೂ ಅಕಾಡೆಮಿ ಸದಸ್ಯ ಸುಕೇಶ್ ಜೈನ್ ಅಳದಂಗಡಿ ತಿಳಿಸಿದ್ದಾರೆ.

ಬಸವ ಅಕ್ಕೂ ಅಕಾಡೆಮಿ ಸಂಸ್ಥಾಪಕರಾದ ಡಾ. ಕೆ. ಬಸವರಾಜುರವರ ನೇತೃತ್ವದಲ್ಲಿ “ಮನೆ ಮನೆಯಲ್ಲೂ ವೈದ್ಯರಾಗುವ ಕನಸಿನೊಂದಿಗೆ” ಜೂ. 19 ಮತ್ತು 20 ರಂದು ಟಿ.ಇ.ಎಂ. ಕಲಿತಿರುವ ವಿದ್ಯಾರ್ಥಿಗಳಿಗಾಗಿ ಆಫ್‌ಲೈನ್‌ನಲ್ಲಿ ಎರಡು ದಿನ ನಡೆಯುವ ನೈಸರ್ಗಿಕ ಚಿಕಿತ್ಸಾ ವಿಧಾನವಾದ ಸಿಂಗಲ್ ಪಾಯಿಂಟ್, ಅಕ್ಯೂಪ್ರೆಜರ್, ಮರ್ಮ ಚಿಕಿತ್ಸೆ, ಸೀಡ್ ಥೆರಪಿ, ದೇಹದ ಪ್ರಮುಖ ಅಕ್ಯೂಪ್ರೆಜರ್ ಪಾಯಿಂಟ್ ಪರಿಚಯ, ಕಲರ್ ಥೆರಪಿ, ದೇಹದಲ್ಲಿ ಎನರ್ಜಿ ಸಮತೋಲನ ಮಾಡುವುದು, ಹೃದಯ ಆರೋಗ್ಯಕ್ಕೆ ನೈಸರ್ಗಿಕ ಪರಿಹಾರಗಳ ಬಗ್ಗೆ ಚಿಕಿತ್ಸಾ ಕಾರ್ಯಗಾರವನ್ನು ಅಂಬೇಡ್ಕರ್ ಭವನ, ಮಿಲ್ಲರ್ ರಸ್ತೆ, ಭಗವಾನ್ ಮಹಾವೀರ್ ಆಸ್ಪತ್ರೆ ಹತ್ತಿರ, ವಸಂತ ನಗರ, ಬೆಂಗಳೂರಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಏರ್ಪಡಿಸಲಾಗಿದೆ

ಕರ್ನಾಟಕಾದ್ಯಂತ ಎಲ್ಲಾ ಜಿಲ್ಲೆಗಳಿಂದ ಆಸಕ್ತಿಯುಳ್ಳ ಟಿ.ಇ.ಎಂ. ವಿದ್ಯಾರ್ಥಿಗಳು ಈ ಕಾರ್ಯಗಾರಕ್ಕೆ ಆಗಮಿಸಿ ಕಾರ್ಯಗಾರದ ಉಪಯೋಗ ಪಡೆಯಲು ಬಸವ ಅಕ್ಯು ಅಕಾಡೆಮಿ ಕೊರುತ್ತಿದೆ. ಹೆಚ್ಚಿನ ಮಾಹಿತಿಗಾಗಿ : 9606496408, 9606496409, 8088139861 ಸಂಪರ್ಕಿಸಿ.

Related posts

ಶಾಲಾ ಬೇಡಿಕೆಗೆ ರಕ್ಷಿತ್ ಶಿವರಾಂ ಸ್ಪಂದನೆ: ಕಲ್ಲೇರಿ ಶಾಲೆಯಲ್ಲಿ ನೂತನ ಶೌಚಾಯ ನಿರ್ಮಾಣ

Suddi Udaya

ಧರ್ಮಸ್ಥಳ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ

Suddi Udaya

ಇಳಂತಿಲ ಗ್ರಾಮ ಪಂಚಾಯತ್ ಉಪ ಚುನಾವಣೆ: ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಕುಸುಮ ಈಶ್ವರ ಗೌಡ ಕಣಕ್ಕೆ

Suddi Udaya

ಬಳ್ಳಮಂಜದಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್.ಡಿ.ಪಿ.ಐ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

Suddi Udaya

ಪಟ್ರಮೆ: ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ರಸ್ತೆ ಸಂಚಾರ ವ್ಯತ್ಯಯ

Suddi Udaya
error: Content is protected !!