24 C
ಪುತ್ತೂರು, ಬೆಳ್ತಂಗಡಿ
August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ಜೂ.15: ಬಳಂಜ ಶಾಲೆಗೆ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ಶಾಲಾ ವಾಹನ ಸಮರ್ಪಣೆ

ಬಳಂಜ: ಸ್ಥಳೀಯ ಬಳಂಜ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ಶಾಲಾ ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಸೌಲಭ್ಯದಿಂದ ನಾಲ್ಕೂರು, ಶಾಂತಿನಗರ, ತೋಟದಪಲ್ಕೆ , ರಾಮನಗರ, ಅಟ್ಲಾಜೆ , ಬಳಂಜ, ಕಟ್ಟಡಬೈಲು, ತೆಂಕಕಾರಂದೂರು, ಆಲಡ್ಕ , ಕಾಪಿನಡ್ಕ , ಗಾಂಧಿನಗರ, ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ನಮ್ಮೂರಿನ ಮಕ್ಕಳ ಶಿಕ್ಷಣದ ಪಯಣಕ್ಕೆ ಅಮೃತ ಸಂಭ್ರಮದ ಕೊಡುಗೆ ಎನ್ನುವ ದ್ಯೇಯದೊಂದಿಗೆ ಆರಂಭವಾಗಿರುವ ಈ ಸೌಲಭ್ಯವನ್ನು ಜೂನ್ 15 2026ನೇ ಸೋಮವಾರ, ಪೂರ್ವಾಹ್ನ 10 ಘಂಟೆಗೆ ಬಳಂಜ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾರವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ರವರ ನಿಧಿಯಿಂದ ನವೀಕರಣಗೊಳಿಸಲಾದ LKG ಕೊಠಡಿಯ ಉದ್ಘಾಟನೆಯೂ ನೆರವೇರಲಿದೆ.
ಅಶ್ವಥ್ ಹೆಗ್ಡೆ ಫೌಂಡೇಶನ್ ಸಂಸ್ಥೆಯು ಈಗಾಗಲೇ ಸುಮಾರು 15 ಲಕ್ಷಕ್ಕೂ ಮಿಕ್ಕಿದ ವೆಚ್ಚದಲ್ಲಿ ಬಳಂಜ ಶಾಲೆಯನ್ನು ವಿಟ್ರಿಫೈಡ್ ಟೈಲ್ಸ್, ಸ್ವಾಗತ ಗೋಪುರ, ಇಂಟರ್ ಲಾಕ್ ಅಳವಡಿಸುವುದರ ಮೂಲಕ ನವೀಕರಣಗೊಳಿಸಿದ್ದಾರೆ. ಇದೀಗ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಶಾಲಾ ವಾಹನವನ್ನು ಸಮರ್ಪಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಜನಜಾಗೃತಿ ಸಮಿತಿಯ ಸ್ಥಾಪಕಾಧ್ಯಕ್ಷರಾದ ಕೆ ವಸಂತ್ ಸಾಲ್ಯಾನ್, ಕುಳೆಂಜಿರೋಡಿ ಗುತ್ತುವಿನ ಗಡಿ ಪ್ರಧಾನರಾದ ಅರುಣ ಹೆಗ್ಗಡೆ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಚಂದ್ರ ಶೇಖರ್ ಪಿ ಕೆ , ಶಿಕ್ಷಣ ಟ್ರಸ್ಟಿನ ಅಧ್ಯಕ್ಷರಾದ ಮನೋಹರ್ ಬಳಂಜ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

.

Related posts

ಶಿಶಿಲ: ಸೃಷ್ಟಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಸೋಮಂತಡ್ಕದಲ್ಲಿ ರಾಮನಾಮ ಸಂಕೀರ್ತನೆ ಕಾರ್ಯಕ್ರಮ: ಕರಸೇವಕ ಸುರೇಶ್ ಭಟ್ ಕೊಲ್ಯ ರವರಿಗೆ ಗೌರವಾರ್ಪಣೆ

Suddi Udaya

ಎ.10-14: ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಯಕ್ಷಭಾರತಿ ಕನ್ಯಾಡಿ ವತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಗುರುವಾಯನಕೆರೆ: ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಯಾಕೂಬ್ ಮುಸ್ಲಿಯಾರ್ ಆಯ್ಕೆ

Suddi Udaya

ನಡ್ತಿಕಲ್ಲು: ಆಧಾರ್ ನೋಂದಣಿ-ತಿದ್ದುಪಡಿ ಶಿಬಿರದ ಉದ್ಘಾಟನೆ

Suddi Udaya
error: Content is protected !!