ಬೆಳ್ತಂಗಡಿ: ಸೋಮಂತಡ್ಕ ಪಂಚಶ್ರೀ ಹಾರ್ಡ್ವೇರ್ ನಲ್ಲಿ ರಜೆ ಟೈಮಲ್ಲಿ ಕೆಲಸಕ್ಕಿದ್ದ ಪುನೀತ್ ಕುಮಾರ್ ಭಾರತೀಯ ಸೇನೆಗೆ(ಗುಜರಾತ್) ಆಯ್ಕೆಯಾಗಿದ್ದು ಅವರನ್ನು ಪಂಚಶ್ರೀ ಹಾರ್ಡ್ವೇರ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ, ಪಂಚಶ್ರೀ ಹಾರ್ಡ್ವೇರ್ ಮಾಲಕ ನಾರಾಯಣ ಗೌಡ ಕೊಲಂಬೆ, ಮೇಜರ್ ಜನರಲ್ ಎಂ ಬಿ ಭಟ್, ನಾರಾಯಣಗೌಡ ದೇವಸ, ರಾಮನ ಶೆಟ್ಟಿ, ಸಚಿನ್ ಭಿಡೆ, ಅರೆಕಲ ರಾಮಚಂದ್ರ ಭಟ್, ವೆಂಕಟ್ರಾಯ ಅಡೂರು, ಚೆನ್ನಕೇಶವ, ನಾಮದೇವರಾವ್ ಉಪಸ್ಥಿತರಿದ್ದರು.












