July 1, 2026
ಅಭಿನಂದನೆಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

ಚೆನ್ನೈನಲ್ಲಿ ಧೂಳೆಬ್ಬಿಸಿದ ದಕ್ಷಿಣ ಕನ್ನಡದ ಹುಡುಗಿಯರು,ಆಲ್ ಇಂಡಿಯಾ ಥ್ರೋಬಾಲ್ ಕೂಟದಲ್ಲಿ ಪ್ರಚಂಡ ಸಾಧನೆ ಮುಳಿಯ ಜ್ಯುವೆಲ್ಸ್ ನಿಂದ ಸಮವಸ್ತ್ರ ಕೊಡುಗೆ

ಬೆಳ್ತಂಗಡಿ: ಕ್ರೀಡಾ ಕ್ಷೇತ್ರಕ್ಕೆ ದಕ್ಷಿಣ ಕನ್ನಡದ ಸಾಧನೆಯನ್ನು ಮತ್ತೊಮ್ಮೆ ನೆನಪು ಮಾಡುವಂತಹ ಕೆಲಸವನ್ನು ದಕ್ಷಿಣ ಕನ್ನಡದ ಪ್ರತಿಭಾನ್ವಿತ ಯುವತಿಯರ ತಂಡ ಮಾಡಿದೆ. ದಕ್ಷಿಣ ಕನ್ನಡದಿಂದ ದೂರದ ತಮಿಳುನಾಡು ತೆರಳಿ ಅಲ್ಲಿ ಪ್ರಥಮ ಸ್ಥಾನ ಪಡೆದು ಕನ್ನಡಿಗರ ಶಕ್ತಿ ತೋರಿಸಿ, ದಕ್ಷಿಣ ಕನ್ನಡಕ್ಕೆ ಕೀರ್ತಿ ತಂದಿದ್ದಾರೆ.

ಜೂ.27-28 ರಂದು ಚೆನ್ನೈನಲ್ಲಿ ಆಲ್ ಇಂಡಿಯಾ ಇಂಟರ್ ಕ್ಲಬ್ ಥ್ರೋಬಾಲ್ ಕೂಟದಲ್ಲಿ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ಫ್ರೆಂಡ್ಸ್ ಉಳ್ಳಾಲ ಅಕಾಡೆಮಿ ತಂಡವು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡವನ್ನು ಚೈತನ್ಯ ಪುತ್ತೂರು ಮುನ್ನಡೆಸಿದ್ದರು. ವೈಷ್ಣವಿ ಉಡುಪಿ ಅವರು ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡರು.

ತಂಡವು ಚೈತನ್ಯ ಪುತ್ತೂರು ,ವೈಷ್ಣವಿ ಉಡುಪಿ ವಿಜಯಲಕ್ಷ್ಮಿ ಉಡುಪಿ, ಆಶಿಕಾ ಬಂದಾರು, ಪ್ರತೀಕ್ಷಾ ಕಾರಿಂಜ,ಜಯಶ್ರೀ ಕಾರಿಂಜ, ಕೀರ್ತಿ ಸಂಪ್ಯ, ಕೀರ್ತಿ ಸುಂಕದಕಟ್ಟೆ,ಅಶ್ವಿನಿ ಉಡುಪಿ,ಅಭಿಜ್ಞ ಉಡುಪಿ, ದಿವ್ಯ ಬೆದ್ರ, ಪ್ರಿಯಾ ಮೈಸೂರು,ಕೀರ್ತನಾ ಮೈಸೂರು, ತಂಡದ ತರಬೇತುಗಾರರಾಗಿ ಪ್ರಜ್ವಲ್ ನಡ , ಪ್ರಜಾಕ್ಷ ಪಟ್ರಮೆ,ಸೃಜನ್ ಗೇರುಕಟ್ಟೆ ಅವರನ್ನು ಒಳಗೊಂಡಿತ್ತು. ಕ್ರೀಡಾಪಟುಗಳಿಗೆ ರಾಜ್ಯದ ಶ್ರೇಷ್ಠ ಸ್ವರ್ಣೋದ್ಯಮ ಮಳಿಗೆ ಮುಳಿಯ ಜ್ಯುವೆಲ್ಸ್ ಸಂಸ್ಥೆಯು ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದೆ.

Related posts

ಇಂದಬೆಟ್ಟು: ಶತಾಯುಷಿ ಮತದಾರ ಬಂಗಾಡಿ ಅರಮನೆಯ ಬಿ. ರವಿರಾಜ್ ಬಲ್ಲಾಳ್ ರಿಗೆ ಚುನಾವಣಾ ಆಯೋಗದಿಂದ ಗೌರವಪೂರ್ವಕ ಸನ್ಮಾನ ಹಾಗೂ ಪ್ರಮಾಣ ಪತ್ರ ವಿತರಣೆ

Suddi Udaya

ಚಲಿಸುತ್ತಿದ್ದ ಸರಕಾರಿ ಬಸ್ ಟಯರ್ ಸ್ಪೋಟ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Suddi Udaya

ಲಾಯಿಲ: ಶ್ರೀ ಗಾಯತ್ರೀ ವಿಶ್ವಕರ್ಮ ಮಹಿಳಾ ಸಂಘದಿಂದ ಶ್ರೀ ಕಾಳಿಕಾಂಬಾ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಜು.30: ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಕಣಿಯೂರು ಗ್ರಾ. ಪಂ. ನ ಸದಸ್ಯ ಪ್ರವೀಣ್ ಗೌಡ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆದ ಹಲ್ಲೆಯನ್ನು ಖಂಡಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಬೃಹತ್ ಪ್ರತಿಭಟನೆ

Suddi Udaya

ಬಳಂಜ ಜ್ಯೋತಿ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆ ಸಭೆ: ಅಧ್ಯಕ್ಷರಾಗಿ ಚೇತನಾ ಜೈನ್, ಪ್ರ.ಕಾರ್ಯದರ್ಶಿಯಾಗಿ ಯಕ್ಷಿತಾ ದೇವಾಡಿಗ

Suddi Udaya

ಸಹಾಯಕ ಆಯುಕ್ತರ ಕಚೇರಿಗೆ ಹಾಜರಾಗುವ ಮುನ್ನ ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ

Suddi Udaya
error: Content is protected !!