ಅಳದಂಗಡಿ : ಇಲ್ಲಿನ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಶಿರ್ಲಾಲುನಿಂದ ಕೆದ್ದುವಿನ ತನಕ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಜು.10ರಂದು ನಡೆಯಿತು.
ಈ ವೇಳೆ ರಸ್ತೆಯ ಎರಡು ಭಾಗದಲ್ಲಿ ಇರುವ ಗಿಡಗಂಟಿಗಳು ಹಾಗೂ ಕಸಗಳನ್ನು ಸ್ವಚ್ಛ ಗೊಳಿಸಿ ಮಳೆಯ ನೀರು ಸರಗವಾಗಿ ಹರಿದು ಹೋಗುವಂತೆ ಮಾಡಲಾಯಿತು. ನಂತರ ವಿದ್ಯುತ್ ಕಂಬದ ಲೈನ್ ಗೆ ತೊಂದರೆ ಆಗುವ ಮರದ ಕೊಂಬೆಗಳನ್ನು ತೆರವುಗೊಳಿಸಿದರು.















