ಬೆಳ್ತಂಗಡಿ : ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರಿಗಾಗಿ ಹದಿಹರೆಯದವರ ಸಬಲೀಕರಣ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಹದಿಹರೆಯದ ಮಕ್ಕಳ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಮತ್ತು ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ಪೋಷಕರ ಪಾತ್ರದ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಗಿನಿ ಲಿಲಿ ಪುಷ್ಪ ರವರು ವಿಶೇಷ ಮಾಹಿತಿಯನ್ನು ನೀಡಿದರು ಹಾಗೂ ಪ್ರಾಂಶುಪಾಲರಾದ ಭಗಿನಿ ಮೋಲಿ ಡಿಕುನ್ನ ಅವರು ಭಾಗವಹಿಸಿ, ಪೋಷಕರಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದ ಸುಗಮಕಾರರಾಗಿ ಶ್ರೀಮತಿ ಸಿಲ್ವಿಯಾ ಪಿಂಟೋ ಉಪಸ್ಥಿತರಿದ್ದರು . ಕಾರ್ಯ ನಿರ್ವಹಣೆಯನ್ನು ಶ್ರೀಮತಿ ಝೀಟಾ ವಹಿಸಿಕೊಂಡರು. ಭಗಿನಿ ಪವಿತ್ರ ಸ್ವಾಗತಿಸಿದರು. ನಿರೂಪಮ ವಂದನಾರ್ಪಣೆ ಸಲ್ಲಿಸಿದರು.















