ಕೊಕ್ಕಡ: ಸೌತಡ್ಕ ಸಮೀಪದ ಕಡೀರ ಬೈಲಿನಲ್ಲಿ ಜು.27ರಂದು ರಾತ್ರಿ ಒಂಟಿ ಸಲಗವು ಪ್ರತ್ಯಕ್ಷಗೊಂಡಿದ್ದು ಕೃಷಿ ತೋಟಕ್ಕೆ ನುಗ್ಗಿ ಅಪಾರ ಬಾಳೆ ಕೃಷಿ ಹಾನಿ ಮಾಡಿದೆ.

ನಂತರ ಬೆಳಿಗ್ಗೆ ಸುಮಾರು 5 ಗಂಟೆಯ ಸಮಯಕ್ಕೆ ಬೈಲಂಗಡಿ ಮತ್ತು ಮಾಸ್ತಿಕಲ್ಲು ಮಜಲು ಪ್ರದೇಶಕ್ಕೆ ಕಾಡಾನೆ ತಲುಪಿದೆ. ಪ್ರಸ್ತುತ ಪಟ್ಟೂರು ಸಮೀಪದ ವಸರಿ ಕಟ್ಟೆ ಗೇರು ತೋಪಿನಲ್ಲಿ ಕಾಣ ಸಿಕ್ಕಿದ್ದು, ಕೃಷಿಕರು ಭಯ ಭೀತರಾಗಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿಯನ್ನು ತಲುಪಿಸಲಾಗಿದ್ಫು, ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ಕಾಡಾನೆಯನ್ನು ಮತ್ತೆ ಕಾಡಿಗೆ ಮರಳಿಸಲು ಪ್ರಯತ್ನಿಸುತ್ತಿದ್ದಾರೆ.
















