ಮಿತ್ತಬಾಗಿಲು: ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಸಮಿತಿ, ವರ ಮಹಾಲಕ್ಷ್ಮೀ ಪೂಜಾ ಸಮಿತಿ ಮತ್ತು ಶ್ರೀ ಮಹಾಗಣಪತಿ ಸೇವಾ ಸಮಿತಿಗಳ ಸಭೆ ಜರಗಿತು. ಮೂರೂ ಸಮಿತಿಗಳ ಲೆಕ್ಕಪತ್ರಗಳನ್ನು ಮಂಡಿಸಲಾಯಿತು.
ನೂತನ ವರ ಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾಗಿ ತುಳಸಿ ದಿನೇಶ್ ಸಾಲಿಯಾನ್ ಕುಕ್ಕಾವು, ಕಾರ್ಯದರ್ಶಿಯಾಗಿ ಪದ್ಮಾವತಿ ಗಣೇಶ ಕುಂಬಾರ ದುರ್ಗಾನಗರ, ಕೋಶಾಧಿಕಾರಿಯಾಗಿ ವಿಜಯಾ ಲಕ್ಷ್ಮಣ ಗೌಡ ಕುಕ್ಕಾವು ಆಯ್ಕೆಯಾಗಿದ್ದಾರೆ.
ಶ್ರೀ ಮಹಾಗಣಪತಿ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ನೋಣಯ್ಯ ಪೂಜಾರಿ ಕುಕ್ಕಾವು, ಕಾರ್ಯದರ್ಶಿಗಳಾಗಿ ಗಣೇಶ ಗೌಡ ಬಾನೊಟ್ಟು ಮತ್ತು ಕೋಶಾಧಿಕಾರಿಯಾಗಿ ಶಶಿಧರ ಗೌಡ ಅಣಿಲ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಬಿ.ಕೆ. ಧನಂಜಯ ರಾವ್ ಅವರು ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.












