22.6 C
ಪುತ್ತೂರು, ಬೆಳ್ತಂಗಡಿ
September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿಯಲ್ಲಿ ನೂತನ ಖಾಝಿ ಪದಗ್ರಹಣ ಸಮಾರಂಭ

ಬೆಳ್ತಂಗಡಿ: ಬೆಳ್ತಂಗಡಿಯ ಖಿಲರ್ ಜುಮ್ಮಾ ಮಸೀದಿ (ಕೇಂದ್ರ ಮಸೀದಿ)ಯ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ಬಾಅಲವಿ ತಂಙಳ್ ಅವರು ಜು.31ರಂದು ಜುಮ್ಮಾ ನಮಾಝ್ ಬಳಿಕ ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ಪದಗ್ರಹಣ ಮಾಡಿದರು.

ನೂತನ ಖಾಝಿಯವರಿಗೆ ಕವರತ್ತಿ (ಲಕ್ಷದ್ವೀಪ) ಖಾಝಿ ಸೈಯ್ಯದ್ ಇ.ಪಿ. ಸೈದಾಲಿ ತಂಙಳ್ ಅವರು ಖಾಝಿ ಪೇಟವನ್ನು ತೊಡಿಸಿದರು. ಖಾಝಿಯ ಉಡುಪನ್ನು ಖಿಲರ್ ಜುಮ್ಮಾ ಮಸೀದಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಹಾಗೂ ಮಾಜಿ ಅಧ್ಯಕ್ಷ ಬಿ.ಎ. ನಝೀರ್ ಅವರು ತೊಡಿಸಿದರು. ಬಳಿಕ ಮಸೀದಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅವರು ನೂತನ ಖಾಝಿಯವರಿಂದ ಪ್ರತಿಜ್ಞಾವಚನ ಸ್ವೀಕರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಅಶ್ರಫ್ ತಂಙಳ್ ಆದೂರು, ಖಾಝಿ ಹುದ್ದೆಯು ಕೇವಲ ಗೌರವದ ಸ್ಥಾನವಲ್ಲ; ಅದು ಧಾರ್ಮಿಕ ಮಾರ್ಗದರ್ಶನ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ಮಹತ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪವಿತ್ರ ಪರಂಪರೆ ಹಾಗೂ ಅಗಾಧ ಧಾರ್ಮಿಕ ಜ್ಞಾನವನ್ನು ಹೊಂದಿರುವ ಸೈಯ್ಯದ್ ನಾಸಿರ್ ಶಿಹಾಬುದ್ದೀನ್ ಬಾಅಲವಿ ತಂಙಳ್ ಅವರ ನಾಯಕತ್ವದಲ್ಲಿ ಸಮಾಜವು ಇನ್ನಷ್ಟು ಒಗ್ಗಟ್ಟು ಹಾಗೂ ಅಭಿವೃದ್ಧಿಯತ್ತ ಸಾಗಲೆಂದು ಅವರು ಶುಭ ಹಾರೈಸಿ ದುವಾ ಮಾಡಿದರು.

ಕಾರ್ಯಕ್ರಮದಲ್ಲಿ ಝೀನತ್ ಬಕ್ಷ್ ಹಾಗೂ ಈದ್ಗಾ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಅಬ್ದುಲ್ ಮಜೀದ್ ಫೈಝಿ ನಂದಾವರ, ಹುಸೈನ್ ದಾರಿಮಿ ರೆಂಜಲಾಡಿ, ತ್ವಾಖಾ ಉಸ್ತಾದರ ಪುತ್ರ ಹುಸೈನ್ ರಹ್ಮಾನಿ, ಅಶ್ರಫ್ ಮೇಯರ್, ದಕ್ಷಿಣ ಕನ್ನಡ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮೈದಿನಬ್ಬ ಹಾಜಿ, ಶಾಕಿರ್ ಫರಂಗಿಪೇಟೆ , ಎಸ್ ಹಸನಬ್ಬ ಫರಂಗಿಪೇಟೆ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಅಡ್ಡೂರು ಹಾಜಿ, ಇಲ್ಯಾಸ್ ಅಲ್-ಝಯಾನ್ (ಮಂಗಳೂರು), ಸಮದ್ ಹಾಜಿ (ಮಂಗಳೂರು), ಫಕೀರಬ್ಬ ಮಾಸ್ಟರ್, ಅಬ್ದುಲ್ ರಹ್ಮಾನ್ ಕಕ್ಕಿಂಜೆ, ಪೇರಲ್ದರಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ನವಾಝ್ ಕಟ್ಟೆ, ಕಾರ್ಯದರ್ಶಿ ಸ್ವಾದಿಕ್ ಕಟ್ಟೆ, ಶಮೀಮ್ ಯೂಸುಫ್ ಹಾಜಿ, ಸಾಲಿ ಮದ್ದಡ್ಕ, ಸಿರಾಜ್ ಚಿಲಿಂಬಿ, ನೌಶಾದ್ ಮದ್ದಡ್ಕ, ರಝಾಕ್ ಶಿರ್ಲಾಲ್, ಉಮರ್ ಕುಂಞ್ಞ ಮುಸ್ಲಿಯಾರ್, ಖಿಲರ್ ಜುಮ್ಮಾ ಮಸೀದಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ಬಿ.ಎಚ್. ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಬಿ.ಎಚ್. ರಝಾಕ್, ಕೋಶಾಧಿಕಾರಿ ಫೈಝಲ್ ಐ.ಜೆ., ಉಪಾಧ್ಯಕ್ಷರಾದ ಬಿ. ಶೇಖುಂಞ್ಞ ಹಾಗೂ ಮಹಮ್ಮದ್ ಶರೀಫ್, ಕಾರ್ಯದರ್ಶಿ ಮಹಮ್ಮದ್ ಕುದ್ರಡ್ಕ, ಸಮಿತಿ ಸದಸ್ಯರಾದ ಹಾರಿಸ್ ಐ.ಜೆ., ಇಸ್ಮಾಯಿಲ್ ಐ.ಬಿ., ಅಬ್ಬಾಸ್ ಹಂಝ, ಎನ್.ಎಸ್. ಅಬ್ದುಲ್ ರಹ್ಮಾನ್, ಸೈದಾಲಿ, ರಿಝ್ವಾನ್ ಬಿ.ಕೆ. ಸೇರಿದಂತೆ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

ಎಸ್.ಬಿ. ಮಹಮ್ಮದ್ ದಾರಿಮಿ ಅವರು ಜುಮ್ಮಾ ಖುತ್ಬಾ ನಿರ್ವಹಿಸಿ, ಸ್ವಾಗತಿಸಿದರು. ಖಿಲರ್ ಜುಮ್ಮಾ ಮಸೀದಿ ಕಾರ್ಯದರ್ಶಿ ಹನೀಫ್ ವರ್ಷ ವಂದಿಸಿದರು.

Related posts

ಬಿಜೆಪಿಯಿಂದ ಹಣ ಹಂಚಿಕೆ ಆರೋಪ : ಮಾಜಿ ಶಾಸಕರಿಂದ ಠಾಣೆಗೆ ದೂರು: ಫ್ಲೈಯಿಂಗ್ ಸ್ಕ್ಯಾಡ್‌ನಿಂದ ಕಾರಿನ ಪರಿಶೀಲನೆ : ಮುಂದುವರಿದ ತನಿಖೆ

Suddi Udaya

ಬಂದಾರು : ಪೆರ್ಲ – ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಮಹಿಳಾ ಸಮಿತಿಯ ವತಿಯಿಂದ ಮಹಿಳಾ ಸಿರಿ ಕಾರ್ಯಕ್ರಮ

Suddi Udaya

ಮಾ.9: ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ಸು ವ್ಯವಸ್ಥೆ

Suddi Udaya

ಲಾಯಿಲ: ಸಾರಿ ಫೋಲ್ಡಿಂಗ್, ಬ್ರೈಡಲ್ ಮೇಕಪ್ ಹಾಗೂ ಸಾರಿ ಗೊಂಡೆ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ಚಂದ್ರಯಾನ -3 ಯಶಸ್ವಿಗಾಗಿ ಕಳೆಂಜ ಶ್ರೀ ಸದಾಶಿವೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಳಂಜ ಶಾಲಾ ಮಕ್ಕಳಿಗೆ ಐಡಿ ಕಾರ್ಡ್ ಹಾಗೂ ಬೆಲ್ಟ್ ವಿತರಣೆ

Suddi Udaya
error: Content is protected !!