ಕೊಕ್ಕಡ: ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರಕ್ಕೆ ಕೆನರಾ ಬ್ಯಾಂಕ್ ನ ಸಹಾಯಕ ಮಹಾಪ್ರಬಂಧಕ ಅಳವಾಲ ವೀರಾಂಜನೇಯಲು ಮತ್ತು ಪುತ್ತೂರು ಡಿವಿಜನ್ ನ ಡಿ.ಜಿ. ಯಂ. ಹರಿಪ್ರಸಾದ ಎನ್.ಯಸ್. ಭೇಟಿ ನೀಡಿದರು.
ಈ ವೇಳೆ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ ಸುಬ್ರಹ್ಮಣ್ಯ ಶಬರಾಯ ಇವರು ಶಾಲು ಹಾಕಿ ಸನ್ಮಾನಿಸಿ, ಅರ್ಚಕರು ಪ್ರಸಾದ ನೀಡಿ ಗೌರವಿಸಿದರು. ಕೆನರಾ ಬ್ಯಾಂಕ್ ನಲ್ಲಿರುವ ಕ್ಷೇತ್ರದ ಎಲ್ಲ ವ್ಯವಹಾರವನ್ನು ಗ್ರಾಹಕ ಸ್ನೇಹ ಪರ ವ್ಯವಹಾರವಾಗುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ ಕ್ಷೇತ್ರದ ಭಕ್ತರ ಸೇವಾ ವ್ಯವಹಾರಗಳಿಗೆ ಅನುಕೂಲವಾಗುವಂತೆ ಆಧುನಿಕ ಸ್ವಯಂಚಾಲಿತ ಬಿಲ್ಲಿಂಗ್ ಯಂತ್ರವನ್ನು ಒದಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನೆಲ್ಯಾಡಿ ಕೆನರಾ ಬ್ಯಾಂಕಿನ ಪ್ರಬಂಧಕರಾದ ಕುಮಾರಿ ನೀರಜಾ ಉಪಸ್ಥಿತರಿದ್ದರು.













