ಮಿತ್ತಬಾಗಿಲು ಗ್ರಾಮದ ಕುಕ್ಕವುನಿಂದ ಕೂಡಬೆಟ್ಟು ಸದಾಶಿವ ದೇಗುಲ ಕಡೆಗೆ ಸಂಪರ್ಕ ಕಲ್ಪಿಸುವ ಪಾದೆ ಸೇತುವೆ ಕಿರು ಸೇತುವೆ ಸಮೀಪ ಭಾರಿ ಮಳೆಗೆ ರಸ್ತೆ ಬಿರುಕು ಬಿಟ್ಟಿದ್ದು ಈ ಪ್ರದೇಶದ ವಾಹನ ಸಂಚಾರ ಸ್ಥಗಿತಗೊಂಡಿದೆ.
ಆ. 2 ರ ತಡ ರಾತ್ರಿಯ ಮಳೆಯ ಅಬ್ಬರಕ್ಕೆ ಕುಸಿತಗೊಂಡ ಘಟನೆ. ನಡೆದಿದೆ. ಈ ಹಿಂದೆ ಪ್ರವಾಹದಿಂದ ಹಾನಿಯಾಗಿದ್ದ ಈ ಪ್ರದೇಶದಲ್ಲಿ ನೂತನ ಸೇತುವೆ ನಿರ್ಮಾಣ ಗೊಂಡ ಒಂದೇ ವರ್ಷದಲ್ಲೀ ಸೇತುವೆ ಕೆಳಭಾಗದ ತಡೆಗೋಡೆ ಕೊರೆಯಲಾರಂಭಿಸಿತ್ತು ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸೇತುವೆ ಕುಸಿಯಲು ಕಾರಣ ಎನ್ನುತ್ತಾರೆ ಸ್ಥಳೀಯರು.
ಈ ಭಾಗದಲ್ಲಿ ಸುಮಾರು 50 ಮನೆಗಳಿದ್ದು ಸೇತುವೆ ಕುಸಿತ ಹಿನ್ನಲೆ ವಾಹನ ಸಂಚಾರ ಸ್ಥಗಿತಗೊಂಡಿದ್ದುಸಂಪರ್ಕ ಅಸ್ತವ್ಯಸ್ತಗೊಂಡಿದೆ. ಸೇತುವೆ ಮೇಲೆ ನಡೆದುಕೊಂಡು ಹೋಗಲು ಸಾಧ್ಯವಾಗಿದ್ದು, ಈ ಭಾಗಕ್ಕೆ ಯಾವುದೇ ಪರ್ಯಾಯ ರಸ್ತೆ ಇಲ್ಲ, ಮಳೆಯ ಹೆಚ್ಚಿದಲ್ಲಿ ನೀರಿನ ರಭಸಕ್ಕೆ ಸೇತುವೆ ಪೂರ್ತಿ ಕುಸಿದಲ್ಲಿ ಈ ಪ್ರದೇಶ ಸಂಪರ್ಕ ಕಳೆದುಕೊಳ್ಳಲಿದೆ. ಕಳೆದ ಮೂರು ವರ್ಷದ ಹಿಂದೆ ನಿರ್ಮಾಣಗೊಂಡ ಈ ಸೇತುವೆಯ ದುಸ್ಥಿತಿಗೆ ಜನರು ಬೇಸರಿಸಿದ್ದಾರೆ.

ಸದ್ರಿ ಸ್ಥಳಕ್ಕೆ ಪಿಡಿಓ ಮೋಹನ್ ಬಂಗೇರ, ಗ್ರಾಮ ಆಡಳಿತಾಧಿಕಾರಿ ಸಂತೋಷ್ ರವರು ಭೇಟಿ ನೀಡಿ ಪರಿಶೀಲಿಸಿದ್ದು ಸಂಚಾರವನ್ನು ನಿರ್ಬಂಧಿಸಲಾಗಿದೆ.













