24 C
ಪುತ್ತೂರು, ಬೆಳ್ತಂಗಡಿ
August 7, 2026
Uncategorized

ಸಂಪೂರ್ಣ ಹದಗೆಟ್ಟ ಕರಂಬಾರು ಬಂತಡ್ಕದ ರಸ್ತೆ ದುರಸ್ತಿಗಾಗಿ ಸ್ಥಳೀಯರಿಂದ ಅಗ್ರಹ

ಶಿರ್ಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬಂತಡ್ಕದ ರಸ್ತೆಯು ತೀರ ಸಂಪೂರ್ಣ ಹದಗೆಟ್ಟಿದೆ ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳು ಹಾಗೂ ಸ್ಥಳೀಯನಿವಾಸಿಗಳು ರಸ್ತೆಯ ಕೆಸರಿನಲ್ಲಿ ಹೊರಲಾಡಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ
ಈ ರಸ್ತೆಗೆ ಹಲವು ಬಾರಿ ಗ್ರಾಮ ಪಂಚಾಯತಿಗೆ ಹಾಗೂ ಜನಪತಿನಿಧಿಗಳಿಗೆ ಮನವಿಯನ್ನು ನೀಡಿದರು ಯಾವುದೇ ಸ್ಪಂದನೆ ನೀಡದಿರುವುದು ಸ್ಥಳಿಯ ಜನರಿಗೆ ಆಕ್ರೋಶಕ್ಕೆ ಕಾರಣವಾಗಿದೆ ಈ ಭಾಗದಲ್ಲಿ ಸರಿ ಸುಮಾರು ನೂರಕ್ಕೂ ಅಧಿಕ ಮನೆಗಳಿವೆ ಇನ್ನಾದರೂ ಈ ರಸ್ತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೊಳ್ಳಿಸಲು ಸ್ಥಳೀಯರು ಆಗ್ರಹಿಸುತ್ತಿದ್ದಾರೆ

ಬೆಳ್ತಂಗಡಿ ತಾಲೂಕಿನ ಕರಂಬಾರು ಬಂತಡ್ಕದ ಪ್ರದೇಶಕ್ಕೆ ಕೊನೆಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಇತ್ತೀಚಿನ ಭಾರಿ ಮಳೆಯಿಂದ ಉಂಟಾದ ಬಂತಡ್ಕದ ರಸ್ತೆ ಹಾನಿಯನ್ನು ಪರಿಶೀಲಿಸಿದರು ಹಾಗೂ ಹಲವು ರಸ್ತೆ ಬಂತಡ್ಕದ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕರ್ನಾಡಿಸ್ ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ. ಸಾಫಿ. ನವೀನ್ ಗೌಡ.ಆನಂದ. ಅಸೈನರ್. ಇಸಾಕ್. ಗಣೇಶ್. ಲಕ್ಷ್ಮಿ ಹಾಗೂ ಗ್ರಾಮ ಪಂಚಾಯತ್, ಶಿರ್ಲಾಲ್ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಎಂ ಕೆ. ಅಲ್ ಉಮ್ಮ ಹೆಲ್ಪ್ ಲೈನ್ ನ ಸದಸ್ಯರಾದ ಸಿದ್ದೀಕ್ ಬಂತಡ್ಕ. ಮೊಹಮ್ಮದ್. ಪುತ್ತು ಮೋನು ಅಶ್ರಫ್ . ಅಝೀಮ್. ಉಮೇಶ್. ದಿನೇಶ್ ಬಂತಡ್ಕ ಇವರು ಉಪಸ್ಥಿತಿ ಇದ್ದರು

ಕೊನೆಗೂ ಬಂತಡ್ಕದ ರಸ್ತೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು:

ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ರಕ್ಷಿತ್ ಶಿವರಾಂ ವಿಪರೀತ ಮಳೆಯಿಂದ ಹಾನಿಗೊಳಲಾದ ಬಂತಡ್ಕ ಪ್ರದೇಶಕ್ಕೆ ಅಗತ್ಯ ನೆರವು ತಲುಪಿಸುವ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಾದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು

Related posts

ತೀರ ಬಡತನದ ಕುಟುಂಬಕ್ಕೆ ಸಹಾಯಹಸ್ತ ನೀಡಿದ ಧಾರ್ಮಿಕ ಮುಖಂಡ ಪುಷ್ಪಗಿರಿ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ನಡ ಸರಕಾರಿ ಪ.ಪೂ. ಕಾಲೇಜಿಗೆ ರನ್ನರ್ಸ್ ಆಫ್ ಪ್ರಶಸ್ತಿ

Suddi Udaya

ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಓಡಿಲ್ನಾಳ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

Suddi Udaya

ತಣ್ಣೀರುಪಂತ ಗ್ರಾಮ ಪಂಚಾಯತ್ ನಲ್ಲಿ ಶಾಂತಿ ಸಭೆ

Suddi Udaya

ತೆಂಕಕಾರಂದೂರು ಆಲಡ್ಕ ಬಿಕ್ಕಿರ ನಿವಾಸಿ ದೇವದಾಸ ನಿಧನ

Suddi Udaya
error: Content is protected !!