ಪಾಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ, ಪಾಲಡ್ಕ ಒಕ್ಕೂಟ ಹಾಗೂ ಸ ಹಿ ಪ್ರಾ ಶಾಲೆ ಪಾಲಡ್ಕ ಸಹಯೋಗದಲ್ಲಿ ಶಾಲಾ ಹೊರಾಂಗಣದಲ್ಲಿ ಗಿಡ ನಾಟಿ ಮಾಡುವ ಮೂಲಕ ಪರಿಸರ ಗಿಡ ನಾಟಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.

ಕೃಷಿ ಮೇಲ್ವಿಚಾರಕ ಕೃಷ್ಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ, ಭೂಮಿತಾಯಿ ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಹಿಸಿ ಪ್ರಾಣಿ ಪಕ್ಷಿಗಳಿಗೆ ಆಹಾರ ಕ್ಕೆ ಅನುಕೂಲವಾಗುವಂತೆ ಹಣ್ಣಿನ ಗಿಡವನ್ನು ಹೆಚ್ಚು ನಾಟಿ ಮಾಡಿ ರಕ್ಷಿಸಬೇಕು ಎಂದು ಮಾಹಿತಿ ನೀಡಿದರು.
ಪಾಲಡ್ಕ ಒಕ್ಕೂಟದ ಅಧ್ಯಕ್ಷೆ ಕುಸುಮಾವತಿ, ನಾರಾಯಣ ಗೌಡ, ಧರನಪ್ಪ, ಮೌಲ್ಯ, ಪುಷ್ಪಾವತಿ, ಸವಿತ, ಯಶೋಧ, ಸುಮಲತಾ, ಚಿತ್ರವತಿ, ವಿಜಯ, ಜಗದೀಶ್, ಅಭಿಷೇಕ್,ಮಹಾಬಲ ಶೆಟ್ಟಿ, ಕಾಂತಪ್ಪ, ಜನಾರ್ಧನ್ ಶೆಟ್ಟಿ, ಜಗದೀಶ್, ಸುಮಲತಾ, ಸೇವಾಪ್ರತಿನಿಧಿ ನಂದಿನಿ ಉಪಸ್ಥಿತರಿದ್ದರು.













