ಬೆಳ್ತಂಗಡಿ : ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಜರುಗಿದ ಆಟಿ ತಿಂಗಳ ವಿಶೇಷ ಕೂಟ ಮಿಲನ್ ಆಹಾರೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಪಾಕ ತಜ್ಞ ಮತ್ತು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಕಕ್ಕಿಂಜೆ ಪರಿಸರದ ಜೈನ್ ಕೇಟರಿಂಗ್ ಇದರ ಮಾಲಕ ಅಶೋಕ್ ಜೈನ್ ಅವರನ್ನು ಸನ್ಮಾನಿಸಲಾಯಿತು.
ಅವರ ಪರಿಚಯವನ್ನು ಮಿಲನ್ ನ ನಿರ್ದೇಶಕರಾದ ವೀರ್ ಬಿ ಸೋಮಶೇಖರ್ ಶೆಟ್ಟಿ ಅವರು ಪ್ರಸ್ತುತ ಪಡಿಸಿದರು. ವೇದಿಕೆಯ ಮೇಲೆ ಭಾರತೀಯ ಜೈನ್ ಮಿಲನ್ ವಲಯ -8 ರ ಉಪಾಧ್ಯಕ್ಷ ವೀರ್ ಸುದರ್ಶನ್ ಜೈನ್ , ಮಿಲನ್ ನಿರ್ದೇಶಕ ವೀರ್ ಪ್ರಮೋದ್ ಕುಮಾರ್ , ಬೆಳ್ತಂಗಡಿ ಮಿಲನ್ ನ ಅಧ್ಯಕ್ಷ ವೀರ್ ಸನ್ಮತಿ ಕುಮಾರ್ ಮತ್ತು ಕಾರ್ಯದರ್ಶಿ ವೀರ್ ಸುಮನ್ ಜೈನ್ ಹಾಜರಿದ್ದರು.













