August 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಟ್ರಮೆ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪಟ್ರಮೆ: ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಹಿರಿಯ ನ್ಯಾಯವಾದಿ ಬಿ ಯಂ ಭಟ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶಪ್ರೇಮ ಅಂದರೆ ಏನೆಂಬುದನ್ನು ನಾವು ಮೊದಲು ಅರಿಯಬೇಕು. ದೇಶಪ್ರೇಮವೆಂದರೆ ದೇಶದೊಳಗಿನ ಜನರ ಬದುಕಿನ ಹಿತ ಚಿಂತನೆಯೇ ಆಗಿದೆ ಎಂಬುದರ ಬದಲು ಕೇವಲ ಗಡಿ, ನಕ್ಷೆ ಎಂಬಂತೆ ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ. ಸಮಾಜದ ಒಳಿತಿಗಾಗಿ ದುಡಿಯುವುದೇ ದೇಶಪ್ರೇಮವಾಗಿದೆ ಎಂದರು.

ಮಸೀದಿ ಗುರುಗಳಾದ ಉಸ್ಮಾನ್ ತೌಫೀಲ್ ರವರು ದೇಶದ ಬಗ್ಗೆ ನಿಷ್ಟೆಯ, ದೇಶಪ್ರೇಮದ ಪ್ರಮಾಣವಚನ ಬೋಧಿಸಲಾಗಿ ಎಲ್ಲರೂ ಪ್ರಮಾಣವಚನ ಮಾಡಿದರು.

ಮಸೀದಿ ಅಧ್ಯಕ್ಷ ಹಾರಿಸ್ ಕಜೆ, ಹಿರಿಯರಾದ ಉಸ್ಮಾನ್ ಅನಾರು, ಮಾಜಿ ಗ್ರಾ.ಪಂ. ಸದಸ್ಯ ಶ್ಯಾಮರಾಜ್ ಮೊದಲಾದವರು ಉಪಸ್ಥಿತರಿದ್ದರು. ಗುರುಗಳು ಸ್ವಾಗತಿಸಿ, ನಿರೂಪಿಸಿ, ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿಯಾಗಿ ಸಿ.ಕೆ ರೋಹಿನಿ ನೇಮಕ

Suddi Udaya

ಬೆಳ್ತಂಗಡಿ: ಅರ್ಹ ಮಹಿಳಾ ರೈತ ಫಲಾನುಭವಿಗಳಿಗೆ ನಾಟಿಕೋಳಿ ಮರಿಗಳ ವಿತರಣೆ

Suddi Udaya

ಪತ್ನಿ – ಮಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪಿ ಬಂಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಸವ೯ಧಮ೯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟನೆ

Suddi Udaya

ಮೂರು ಜನ ವಿಶೇಷ ಚೇತನರನ್ನು ಒಳಗೊಂಡ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ನೆರವು

Suddi Udaya

ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರ ಸಭೆ

Suddi Udaya
error: Content is protected !!