ಪಟ್ರಮೆ: ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಹಿರಿಯ ನ್ಯಾಯವಾದಿ ಬಿ ಯಂ ಭಟ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶಪ್ರೇಮ ಅಂದರೆ ಏನೆಂಬುದನ್ನು ನಾವು ಮೊದಲು ಅರಿಯಬೇಕು. ದೇಶಪ್ರೇಮವೆಂದರೆ ದೇಶದೊಳಗಿನ ಜನರ ಬದುಕಿನ ಹಿತ ಚಿಂತನೆಯೇ ಆಗಿದೆ ಎಂಬುದರ ಬದಲು ಕೇವಲ ಗಡಿ, ನಕ್ಷೆ ಎಂಬಂತೆ ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ. ಸಮಾಜದ ಒಳಿತಿಗಾಗಿ ದುಡಿಯುವುದೇ ದೇಶಪ್ರೇಮವಾಗಿದೆ ಎಂದರು.
ಮಸೀದಿ ಗುರುಗಳಾದ ಉಸ್ಮಾನ್ ತೌಫೀಲ್ ರವರು ದೇಶದ ಬಗ್ಗೆ ನಿಷ್ಟೆಯ, ದೇಶಪ್ರೇಮದ ಪ್ರಮಾಣವಚನ ಬೋಧಿಸಲಾಗಿ ಎಲ್ಲರೂ ಪ್ರಮಾಣವಚನ ಮಾಡಿದರು.
ಮಸೀದಿ ಅಧ್ಯಕ್ಷ ಹಾರಿಸ್ ಕಜೆ, ಹಿರಿಯರಾದ ಉಸ್ಮಾನ್ ಅನಾರು, ಮಾಜಿ ಗ್ರಾ.ಪಂ. ಸದಸ್ಯ ಶ್ಯಾಮರಾಜ್ ಮೊದಲಾದವರು ಉಪಸ್ಥಿತರಿದ್ದರು. ಗುರುಗಳು ಸ್ವಾಗತಿಸಿ, ನಿರೂಪಿಸಿ, ಧನ್ಯವಾದವಿತ್ತರು.












