August 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ರುಕ್ಮಯ್ಯ ಮೂಲ್ಯ ವಹಿಸಿದ್ದರು.

ಧ್ವಜಾರೋಹಣ ಕಾರ್ಯಕ್ರಮವನ್ನು ಲಕ್ಷ್ಮಣ ನಾಯಕ್ ಭಾರತೀಯ ಅರೆಸೇನಾ ಪಡೆಗಳ ನಿವೃತ್ತ ಯೋಧರು ನೆರವೇರಿಸಿದರು.

ಮುಖ್ಯ ಅತಿಥಿ ತಾಲೂಕು ಘಟಕದ ಅಧ್ಯಕ್ಷರು ನಿವೃತ್ತ ಸೈನಿಕರು ಚಿತ್ತರಂಜನ್ ರೈ, ವೀರಪ್ಪ ಪೂಜಾರಿ ಜಿಲ್ಲಾ ನಿರ್ದೇಶಕರು ನಿವೃತ್ತ ಸೈನಿಕರು, ಸೀತಾರಾಮ್ ಶೆಟ್ಟಿ ತಾಲೂಕು ಕೋಶಾಧಿಕಾರಿ ನಿವೃತ್ತ ಸೈನಿಕರು, ಸೀನಪ್ಪ ಆಳ್ವ ಸಂಘಟನಾ ಕಾರ್ಯದರ್ಶಿ ನಿವೃತ್ತ ಸೈನಿಕರು ಭಾಗವಹಿಸಿದ್ದರು.

ಅತಿಥಿಗಳಾಗಿ ನಿವೃತ್ತ ಸೈನಿಕರಾದ ಜಯರಾಮ ಶೆಟ್ಟಿ, ಮಾಧವ ನಾಯಕ್, ಮಂಜಪ್ಪ, ಮೋಹನ್ ಕುಲಾಲ್ , ಅದನಿ, ನಾರಾಯಣ ಪೂಜಾರಿ, ಮೋನಪ್ಪ ಗೌಡ, ಪ್ರಸಾದ್ ಗೌಡ, ಸುವರ್ಣ, ಹಾಗೂ ರೋಬರ್ಟ್ ಸಿಕ್ವೆರಾ ,ಒಟ್ಟು 15 ಮಂದಿ ನಿವೃತ್ತ ಯೋಧರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಸೇನೆಗೆ ಸೇರುವುದರಿಂದ ಆಗುವ ಪ್ರಯೋಜನಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಮಾಧವ ಶೆಟ್ಟಿ ಶಿಕ್ಷಣ ತಜ್ಞರು ಎಸ್ ಡಿ ಎಂ ಸಿ, ಹಾಗೂ ಸರ್ವ ಸದಸ್ಯರು, ಪಂಚಾಯತ್ ಮಾಜಿ ಸದಸ್ಯರು, ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸುಭಾಶ್ಚಂದ್ರ ಪಿ ಪೂಜಾರಿ ದೈ. ಶಿ ನಿರ್ವಹಿಸಿದರು ಮುಖ್ಯ ಶಿಕ್ಷಕ ಎಸ್ ಪ್ರಕಾಶ ನಾಯ್ಕ್ ಪ್ರಸ್ತಾವಿಸಿ ಸ್ವಾಗತ ಮಾಡಿದರು. ವೆಂಕಪ್ಪ ಬಿ ಸಮಾಜ ವಿಜ್ಞಾನ ಶಿಕ್ಷಕರು ಮುಖ್ಯ ಭಾಷಣಕಾರರಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಮಾಡಿದರು. ಅವಿನಾಶ್ ಕನ್ನಡ ಭಾಷಾ ಶಿಕ್ಷಕರು ಅಭಿನಂದಿಸಿದರು.

Related posts

ಉಜಿರೆ ವಲೇರಿಯನ್ ಡಯಾಸ್ ನಿಧನ

Suddi Udaya

ಮೊಗ್ರು : ಕಲ್ಲಮಾಡ ಗುತ್ತಿಲಾರು ದಿ.ಭಾರತಿಯಮ್ಮ ಸ್ಮರಣಾರ್ಥ ನೂತನ ಬಸ್ ತಂಗುದಾಣ ಲೋಕಾರ್ಪಣೆ

Suddi Udaya

ನಾರಾವಿ ಗ್ರಾಮ ಸಭೆ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಗ್ರಾಮಸ್ಥರ ಚರ್ಚೆ

Suddi Udaya

ಧರ್ಮಸ್ಥಳದಲ್ಲಿ ಗೋ ರಥ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಗೋ ರಥ ಯಾತ್ರೆಗೆ ಶುಭ ಹಾರೈಕೆ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಎಲ್.ಸಿ.ಆರ್ ವಿದ್ಯಾ ಸಂಸ್ಥೆಗೆ ಪ್ರಶಸ್ತಿ

Suddi Udaya

ಪುತ್ತೂರು ಬಿಲ್ಲವ ಸಂಘದಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ರವರಿಗೆ ಅಭಿನಂದನೆ

Suddi Udaya
error: Content is protected !!