ಕುತ್ಲೂರು: ಶಿವಶಕ್ತಿ ಫ್ರೆಂಡ್ಸ್ ಕ್ಲಬ್, ಕುತ್ಲೂರು ವತಿಯಿಂದ ಪೊಯ್ಯಲಡ್ಡ ಗದ್ದೆಯಲ್ಲಿ ಆಯೋಜಿಸಲಾದ “ಕೆಸರ್ದ ಗೊಬ್ಬು” ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಐಸ್ ಹಾಕಿ ಪದಕ ವಿಜೇತ ನಿಶ್ಕ್ ಹರೀಶ್ ಸಾಲ್ಯಾನ್ ಅವರನ್ನು ಶಾಸಕ ಹರೀಶ್ ಪೂಂಜ ಅವರು ಸನ್ಮಾನಿಸಿದರು.
2026ರ ಜೂನ್ನಲ್ಲಿ ಡೆಹ್ರಾಡೂನ್ನಲ್ಲಿ ನಡೆದ ರಾಷ್ಟ್ರೀಯ ಐಸ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕವನ್ನು 12 ವರ್ಷದೊಳಗಿನವರ ವಿಭಾಗದಲ್ಲಿ ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದ ಸಾಧನೆಗಾಗಿ ನಿಶ್ಕ್ ಅವರನ್ನು ಗೌರವಿಸಲಾಯಿತು.
ಕುತ್ಲೂರಿನ ಸಮೃದ್ಧಿ ನಿವಾಸಿ ಹರೀಶ್ ಡಾಕಯ್ಯ ಮತ್ತು ಬಿನಾಕ ಹರೀಶ್ ದಂಪತಿಯ ಪುತ್ರನಾದ ನಿಶ್ಕ್, ಪ್ರಸ್ತುತ ಬೆಂಗಳೂರಿನ ಅಕ್ಷಯನಗರದಲ್ಲಿ ವಾಸವಾಗಿದ್ದು, ಡೆಲ್ಲಿ ಪಬ್ಲಿಕ್ ಸ್ಕೂಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇದಕ್ಕೂ ಮೊದಲು 2026ರ ಏಪ್ರಿಲ್ನಲ್ಲಿ ಡೆಹ್ರಾಡೂನ್ನಲ್ಲಿ ನಡೆದ 10 ದಿನಗಳ ರಾಜ್ಯ ತರಬೇತಿ ಶಿಬಿರದಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಚಿನ್ನದ ಪದಕ ಗಳಿಸಿದ್ದರು.
ಅವರು ಹಾಕಿ ತರಬೇತುದಾರರಾದ ಅರುಣ್, ಆರ್ಯನ್ ಮತ್ತು ಅಶ್ವಿನ್ ಅವರಿಂದ ತರಬೇತಿ ಪಡೆದಿದ್ದು, ಪ್ರಸ್ತುತ ಫಾಲ್ಕನ್ ಸ್ಕೇಟಿಂಗ್ ಅಕಾಡೆಮಿಯ ಶೇಖ್ ಅಬ್ದುಲ್ಲಾ ಅವರ ಮಾರ್ಗದರ್ಶನದಲ್ಲಿ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ.
ವಿವಿಧ ಶಾಲಾ, ಅಂತರಶಾಲಾ ಸ್ಪರ್ಧೆಗಳಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ನಿಶ್ಕ್, ತಮ್ಮ ಸಾಧನೆಯ ಮೂಲಕ ಕುತ್ತ್ಲೂರು ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಲಿ ಎಂದು ಗ್ರಾಮಸ್ಥರು ಶುಭ ಹಾರೈಸಿದ್ದಾರೆ.












