ಬೆಳ್ತಂಗಡಿ: ಉಜಿರೆ–ಬೆಳಾಲು ಸಂಪರ್ಕಿಸುವ ಓಡಲ ರಸ್ತೆಯಲ್ಲಿರುವ ರಸ್ತೆ ದಿಣ್ಣೆಯಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಓಡಲ ರಸ್ತೆಯಲ್ಲಿರುವ ರಸ್ತೆ ದಿಣ್ಣೆಗೆ ಯಾವುದೇ ಬಿಳಿ ಬಣ್ಣ ಬಳಿದಿಲ್ಲ. ಅಲ್ಲದೆ, ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಸ್ಪಷ್ಟವಾಗಿ ಕಾಣುವಂತೆ ರಿಪ್ಲೆಕ್ಟರ್ಗಳನ್ನೂ ಅಳವಡಿಸಲಾಗಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ರಸ್ತೆ ದಿಣ್ಣೆ ಗಮನಕ್ಕೆ ಬಾರದೆ ವಾಹನಗಳು ಅಪಘಾತಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆ ದಿಣ್ಣೆ ಸೂಕ್ತವಾಗಿ ಗುರುತಿಸುವಂತಿಲ್ಲದಿರುವುದು ಅಪಾಯಕ್ಕೆ ಕಾರಣವಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದಿಣ್ಣೆಗೆ ಬಿಳಿ ಬಣ್ಣ ಬಳಿದು, ಅಗತ್ಯವಿರುವ ರಿಪ್ಲೆಕ್ಟರ್ಗಳನ್ನು ಅಳವಡಿಸುವ ಮೂಲಕ ವಾಹನ ಸವಾರರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.











