ಬೆಳ್ತಂಗಡಿ : ನಿಡ್ಲೆಯಲ್ಲಿ ಮತ್ತೆ ಕಾಡಾನೆಯು ದಾಳಿ ಮಾಡಿದ್ದು ಹತ್ತಿರದ ಬೂಡುಜಾಲಿನಲ್ಲಿ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿಗೊಳಿಸಿದೆ.


ಆ.25ರಂದು ರಾತ್ರಿ ಕೊಂಕ ಹರಿಕೃಷ್ಣ ರಾವ್ ರವರ ತೋಟಕ್ಕೆ ಕಾಡಾನೆ ನುಗ್ಗಿ ಅಡಿಕೆ ಬಿಡ, ಬಾಳೆಗಿಡ ಹಾಗೂ ನೀರಿನ ಪೈಪ್ ಗಳನ್ನು ಪುಡಿಗೊಳಿಸಿದೆ. ಇಂದು ಬೆಳಿಗ್ಗೆ ಬೂಡುಜಾಲುವಿನ ಬೀರಡ್ಕದಲ್ಲಿ ಕಾಡಾನೆಯ ದಾಳಿಯಿಂದ ಅಪಾರ ಹಾನಿ ಉಂಟುಮಾಡಿದೆ. ಕಾಡಾನೆಯ ದಾಳಿಯಿಂದ ಗ್ರಾಮಸ್ಥರು ಆತಂಕಗೊಳ್ಳಾಗಿದ್ದಾರೆ.











