September 13, 2026
Uncategorized

ಲಾಯಿಲ ಗ್ರಾಮದ ಕರಿಯ ಮೊಗೇರ ಕುಟುಂಬಕ್ಕೆ ಸಾಂತ್ವಾನವಾದ “ಹಿದಾಯ ಫೌಂಡೇಶನ್”

ಬೆಳ್ತಂಗಡಿ: ಮನೆ ಮಂದಿಯೆಲ್ಲರೂ ಬೇರೆ ಬೇರೆ ಅನಾರೋಗ್ಯಗಳಿಗೆ ತುತ್ತಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವ ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಅವರ ಬಗ್ಗೆ ವಿಶೇಷ ವರದಿ ವೀಕ್ಷಿಸಿದ ಜಿಲ್ಲೆಯ ಹೆಮ್ಮೆಯ ಸಮಾಜ ಸೇವಾ ಸಂಸ್ಥೆ “ಹಿದಾಯ ಫೌಂಡೇಶನ್” ತಕ್ಷಣಕ್ಕೆ ಆ ಕುಟುಂಬಕ್ಕೆ ಸ್ಪಂದಿಸಿದೆ.

ಸೆ. 13 ರಂದು ಕರಿಯ ಮೊಗೇರರ ಮನೆಗೆ ಭೇಟಿ ನೀಡಿದ ಸಂಸ್ಥೆಯ
ಅಧ್ಯಕ್ಷ ಲ. ಮುಹಮ್ಮದ್ ಹನೀಫ್ ಗೋಳ್ತಮಜಲು ನೇತೃತ್ವದ ನಿಯೋಗ ಕರಿಯ ಮೊಗೇರ ಅವರಿಗೆ ಅಗತ್ಯ ಬೇಕಾದ ಶೌಚಾಲಯವನ್ನು ನಿರ್ಮಿಸಿಕೊಡುವುದಲ್ಲದೆ ಪ್ರತೀ ತಿಂಗಳು ಬೇಕಾದ ದಿನಸಿ ಸಾಮಾಗ್ರಿ ಕೊಡುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಸಂಸ್ಥೆಯ ಟ್ರಸ್ಟಿ ಬಶೀರ್ ಎಂ.ಎಂ., ಆಹಾರ ವಿಭಾಗದ ಆಸಿಫ್ ಇಕ್ಬಾಲ್, ಸಮಿತಿಯ ಇತರ ಪ್ರಮುಖರಾದ ಇಬ್ರಾಹಿಂ ಕುಂಬಡ ಮಜಲು, ಹೈದರ್ ಫರಂಗಿಪೇಟೆ, ರಫೀಕ್ ಕಲ್ಲಡ್ಕ, ಲಾಯಿಲದ ಶ್ರೀ ಗುರು ಎಂಟರ್ ಪ್ರೈಸಸ್ ಮಾಲಿಕ ಅಶೋಕ್ ಶೆಟ್ಟಿ ಇವರು ಉಪಸ್ಥಿತರಿದ್ದರು.

ಕರಿಯ ಮೊಗೇರ ಅವರ ಮನೆಯ ಈ ದಯನೀಯ ಸ್ಥಿತಿಯ ಬಗ್ಗೆ ಸಮಾಜಕ್ಕೆ ತಿಳುವಳಿಕೆ ಮೂಡಿಸಿದ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಜಿ.ಪಂ ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಅವರ ಕಾರ್ಯವನ್ನು ಸಂಸ್ಥೆ ಈ ಸಂದರ್ಭ ಸ್ಲಾಘಿಸಿತು.

Related posts

ಬೆಳ್ತಂಗಡಿ ವಿಷ್ಣು ಸೇಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

Suddi Udaya

ಸಾರ್ವಜನಿಕ ಪ್ರದೇಶದಲ್ಲಿ ಬೇಕಾಬಿಟ್ಟಿ ಕಸ ಎಸೆದವರಿಂದಲೇ ವಿಲೇವಾರಿ ಮಾಡಿ, ದಂಡ ವಿಧಿಸಿದ: ಲಾಯಿಲ ಗ್ರಾ‌ಪಂ ಪಿಡಿಓ ಶ್ರೀನಿವಾಸ್ ಡಿ ಪಿ ಹಾಗೂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿಯವರಿಗೆ ಸಾರ್ವಜನಿಕರಿಂದ ಪ್ರಶಂಸೆ

Suddi Udaya

ಡಾ.ಗೋಪಾಲಕೃಷ್ಣ ಕಾಂಚೋಡುರವರಿಗೆನಿವೃತ್ತ ಸಾಧಕ ಯೋಧ ಪ್ರಶಸ್ತಿ ಪ್ರದಾನ

Suddi Udaya

ಜು.7: ಮರಳು ಮತ್ತು ಕೆಂಪು ಕಲ್ಲಿನ ಕೊರತೆಯಿಂದ ಕಾರ್ಮಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ವಿರುದ್ಧ ಪ್ರತಿಭಟನೆ

Suddi Udaya

ನಡ: ಭಾರೀ ಗಾಳಿಗೆ ಮನೆಗೆ ಮರ ಬಿದ್ದು ಹಾನಿ

Suddi Udaya
error: Content is protected !!