ಶಿಶಿಲ: ಸೆ. 18 ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಸಮಸ್ಯೆಯಾದ ಪರಿಸರ ಸೂಕ್ಷ್ಮ ವಲಯದ (ESA) 7 ನೇ ಕರಡು ಅಧಿಸೂಚನೆಯ ಕುರಿತು ಪ್ರಥಮವಾಗಿ ಚರ್ಚೆ ನಡೆಸಿ

ಸಂಪೂರ್ಣವಾಗಿ ಕೈ ಬಿಡಬೇಕು ಮತ್ತು ಜನವಸತಿ ಪ್ರದೇಶಕ್ಕೂ ಪಶ್ಚಿಮ ಘಟ್ಟಕ್ಕೂ ಗಡಿ ಗುರುತು ಮಾಡಬೇಕು ಮತ್ತು 0 (ಶೂನ್ಯ) ಬಫರ್ ಜೋನ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಶಿಶಿಲ ಮಲೆನಾಡಿ ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಶಿಶಿಲ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.











