23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ ಚಂದ್ರಹಾಸ್ ಬಳಂಜ

ಬೆಳ್ತಂಗಡಿ: ಸೇವೆ ಯಾವ ರೂಪದಲ್ಲೂ ಬೇಕಾದರು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಬಹುಮುಖ‌ ಪ್ರತಿಭೆ,ಸ್ನಾತಕೋತ್ತರ ಪದವಿದಾರ ಚಂದ್ರಹಾಸ ಬಳಂಜ ಕ್ಯಾನ್ಸರ್‌ ಪೀಡಿತರಿಗಾಗಿ ತಮ್ಮ‌ ಕೇಶವನ್ನ ದಾನ‌ ಮಾಡಿದ್ದಾರೆ.

ಯುವ ಶಕ್ತಿ‌ ಸೇವಾ ಪಥ ತಂಡದ ಜೊತೆಗೆ ಸೇರಿಕ್ಕೊಂಡು ತಮ್ಮ‌ ಕೇಶವನ್ನ ದಾನ‌ಮಾಡಿ ಯುವ ಸಮುದಾಯಕ್ಕೆ ಈ‌ ಮುಖೇನ ಆದರ್ಶರಾಗಿದ್ದಾರೆ.‌

ಯುವಕರು ಈ‌ ರೀತಿಯ ಕೆಲಸಗಳನ್ನು ಮಾಡಲು ಆದಷ್ಟು ಮುಂದೆ ಬರಬೇಕು‌ ಮತ್ತು ಇನ್ನಷ್ಟು‌ ಜನರಿಗೆ ಅದು‌ ಸ್ಫೂರ್ತಿಯಾಗಬೇಕು. ಹಾಗು ಇದರಿಂದ ಕ್ಯಾನ್ಸರ್‌ ಪೀಡಿತರಿಗು ಕೂಡ ಹೊಸ ಭರವಸೆಯನ್ನ ತುಂಬುವಲ್ಲಿ‌ ಸಹಕಾರಿಯಾಗುತ್ತದೆ.

ಬಹುಮುಖ‌ ಪ್ರತಿಭೆಯಾಗಿರುವ ಇವರು ತಮ್ಮ‌ ಪ್ರತಿಭೆ‌‌ ಮುಖೇನ‌ ರಾಜ್ಯ‌,ರಾಷ್ಟ್ರ‌ಮಟ್ಟದ‌ ಪ್ರಶಸ್ತಿಗಳನ್ನ ಪಡೆದಿದ್ದು ಒಬ್ಬ ತರಬೇತುದಾರರಾಗಿಯೂ ಶಾಲಾ‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ , ಯುವ ಸಮುದಾಯಕ್ಕೆ‌ ಸ್ಫೂರ್ತಿದಾಯಕ ತರಬೇತಿಗಳನ್ನ ನಡೆಸುತ್ತ ಬರುತ್ತಿದ್ದಾರೆ.

ಇವರು ಪತ್ರಕರ್ತ ಸಂತೋಷ್ ಪಿ ಕೋಟ್ಯಾನ್ ಬಳಂಜರವರ ಸಹೋದರ.

Related posts

ಉಜಿರೆಯಲ್ಲಿ ಯಕ್ಷಭಾರತಿಯಿಂದ ತಾಳಮದ್ದಳೆ

Suddi Udaya

ಪ್ಯಾಲೆಸ್ತೀನ್ ದೇಶದ ಜನತೆಗೆ ಬೆಂಬಲ ಸೂಚಿಸಿ ಎಸ್‌ಡಿಪಿಐ ವತಿಯಿಂದ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

Suddi Udaya

ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ

Suddi Udaya

ಮುಂಡಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನ ನೀಡಿದ ಮಂಜೂರಾತಿ ಪತ್ರ ವಿತರಣೆ

Suddi Udaya

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ-ನಿಟ್ಟಡೆ ಸಂಘಟನೆ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Suddi Udaya

ಮೈರೋಳ್ತಡ್ಕ ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

Suddi Udaya
error: Content is protected !!