September 6, 2026
ಅಪರಾಧ ಸುದ್ದಿ

ಪಡಂಗಡಿ ಪುತ್ಯೆಯಲ್ಲಿವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ,ಕಾಲುಗ ಳನ್ನು ಕಟ್ಟಿ , ಮೊಬೈಲ್ ನ್ನು ಕಿತ್ತು ಕೊಂಡು, ಪಿನ್ ನಂಬರ್ ಪಡೆದು ರೂ. 82 ಸಾವಿರ ಖಾತೆಯಿಂದ ವಗಾ೯ಯಿಸಿ ವಂಚನೆ

ಪಡಂಗಡಿ : ಇಲ್ಲಿನ ಜಾನೆಬೈಲು ಪುತ್ಯೆಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಇಬ್ಬರುಹಲ್ಲೆ ನಡೆಸಿ,ಕಾಲುಗಳನ್ನು ಲುಂಗಿಯಿಂದ ಕಟ್ಟಿ , ಮೊಬೈಲ್ ನ್ನು ಕಿತ್ತು ಕೊಂಡು, ಪಿನ್ ನಂಬರ್ ಪಡೆದು ರೂ. 82 ಸಾವಿರ ಖಾತೆಯಿಂದ ವಗಾ೯ಯಿಸಿ, ಅಂಗಳದಲ್ಲಿ ನಿಲ್ಲಿಸಿದ ರೂ 2. 82 ಲಕ್ಷ ಬೆಲೆಬಾಳುವ ಇಲೆಕ್ಟ್ರಿಕ್ ತ್ರಿಚಕ್ರ ವಾಹನ ಸಹಿತ ಪರಾರಿಯಾಗಿರುವ‌ ಬಗ್ಗೆ ಮಾ. 30ರಂದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡಂಗಡಿ ಗ್ರಾಮದ ಮುಕ್ತಿದಾಮ ಜಾನೆಬೈಲು ಪುತ್ಯೆಮನೆ ನಿವಾಸಿ ಗೋವಿಯಸ್ (64 ವರ್ಷ) ರವರು ನೀಡಿದ ದೂರಿನಂತೆ ರಿಯಾಜ್ ಮತ್ತು ಪೈಝಲ್ ಎಂಬವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಠಾಣೆ ಅಕ್ರ ನಂ 20/2023 ಕಲಂ; 324, 506, 394 ಐಪಿಸಿ. ಯಂತೆ ಪ್ರಕರಣ ದಾಖಲಾಗಿದೆ.

ಮಾ.30 ರಂದು ರಾತ್ರಿ ಸಮಯ 8 ಗಂಟೆಗೆ ಪಡಂಗಡಿ ಗ್ರಾಮದ ಜಾನೆಬೈಲು ಪುತ್ಯೆ ಮನೆಯ ಬಳಿ ಇರುವ ರಬ್ಬರ್ ಪ್ರೊಸಸಿಂಗ್ ಶೆಡ್ ಬಳಿ ಮಗನಾದ ಐಸಾಕ್ ಅಲೈಸ್ ಗೋವಿಯಸ್ ಜೊತೆ ಮೊಬೈಲ್ ಪೋನಿನಲ್ಲಿ ಮಾತನಾಡುತ್ತಿರುವ ಸಮಯ ತನ್ನ ಬಳಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಪರಿಚಯದ ರಿಯಾಜ್ ಮತ್ತು ಪೈಝಲ್ ಎಂಬವರು ಬಂದು ಕಟ್ಟಿಗೆ ಕೋಲಿನಿಂದ ಹಲ್ಲೆ ನಡೆಸಿ
ಕೆಳಗಡೆ ಬಿದ್ದ ನನ್ನ ಕಾಲುಗಳನ್ನು ಲುಂಗಿಯಿಂದ ಕಟ್ಟಿ ರಿಯಾಜ್ ಕೈಯಲ್ಲಿದ್ದ ಮೊಬೈಲ್ ನ್ನು ಎಳೆದಾಗ ಪೈಝಲ್ ಆತನಲ್ಲಿದ್ದ ಶಾಲಿನಿಂದ ಕುತ್ತಿಗೆಗೆ ಬಿಗಿದು ಗೂಗಲ್ ಪಿನ್ ಹೇಳಿ ಎಂದು ಬೆದರಿಸಿ ಪಿನ್ ನಂಬ್ರ ಪಡೆದು ರೂ 82,000/- ರೂ ವನ್ನು ಅವರ ಹೆಂಡ್ತಿಯರ ಹೆಸರಿನ ಖಾತೆಗೆ ವರ್ಗಾಯಿಸಿ ಮೊಬೈಲ್ ನ್ನು ಮತ್ತು ಅಂಗಳದಲ್ಲಿ ನಿಲ್ಲಿಸಿದ ರೂ 2.82ಲಕ್ಷ ಬೆಲೆಬಾಳುವ ಮಹೀಂದ್ರಾ ಇಲೆಕ್ಟ್ರಿಕ್ ಮೊಬಾಲಿಟಿ ತ್ರಿಚಕ್ರ ವಾಹನ ಕಳವು ಮಾಡಿಕೊಂಡು ಹೋಗಿರುವುದಾಗಿ, ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಬಿಲ್ಲವ ಸಂಘಟನೆಗಳ ಆಗ್ರಹ

Suddi Udaya

ಕಕ್ಕಿಂಜೆಯ ಜೆ.ಕೆ ಎಲೆಕ್ಟ್ರಿಕಲ್ಸ್‌ ಮತ್ತು ವೈಂಡಸಸ್‌೯ ಅಂಗಡಿಯಿಂದ
ರೂ.94 ಸಾವಿರ ಮೌಲ್ಯದ 20 ಕೆ.ಜಿ ಸ್ಕ್ರಾಪ್‌ ಮತ್ತು ದುರಸ್ತಿಗೆ ಬಂದ ಪಂಪುಗಳ ಕಳವು

Suddi Udaya

ರಸ್ತೆ ಬದಿ ವಾಹನಕ್ಕಾಗಿ ತನ್ನ ತಾಯಿ ಜೊತೆ ಕಾಯುತ್ತಿದ್ದ ಪುಟ್ಟ ಬಾಲಕಿ ಸಾತ್ವಿಕಾ ದ್ವಿಚಕ್ರ ವಾಹನ ‌ ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ

Suddi Udaya

ಕಾಡು ಹಂದಿ ಬೈಕ್ ಗೆ ಡಿಕ್ಕಿ ತಂದೆ ಮಗನಿಗೆ ಗಾಯ

Suddi Udaya

ಕೊಕ್ಕಡ ಗ್ರಾಮ ಪಂಚಾಯತ್ ಅಭಿವೃದ್ಧಿ ಸಹಿಸದ ಕಿಡಿಗೇಡಿಗಳಿಂದ ಬ್ಯಾನರ್ ದ್ವಂಸ ಪ್ರಕರಣ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿ‌ ಸಂದೇಶಗಳ ಪೋಸ್ಟ್ : ಬೆಳ್ತಂಗಡಿ ಹಾಗೂ ವೇಣೂರು ಠಾಣೆಯಲ್ಲಿ 6 ಪ್ರಕರಣ ದಾಖಲು

Suddi Udaya
error: Content is protected !!