July 23, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

ಕೊಕ್ಕಡ : ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ಸಾಮಾನ್ಯ ಸಭೆಯು ಕೊಕ್ಕಡ ಮರಿಯಾಕ್ರಪಾ ಕಚೇರಿಯಲ್ಲಿ ಮೇ. 23 ರಂದು ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಜಿತೇಶ್ ಎಲ್ ಪಿರೇರಾ ವಹಿಸಿದ್ದರು.

ವಲಯ 15 ವಲಯಾಡಳಿತ ಸಮಿತಿ ಸಭೆಯನ್ನು ಕೊಕ್ಕಡ ಘಟಕದ ಆತಿಥ್ಯದಲ್ಲಿ ಮೇ. 28 ರಂದು ನಡೆಸಲು ನಿರ್ಧರಿಸಲಾಯಿತು.

ಜೂನ್ ತಿಂಗಳಲ್ಲಿ ಬ್ರಹತ್ ರಕ್ತದಾನ ಶಿಬಿರ, ರಕ್ತದಾನಿಗಳಗೆ ಅಭಿನಂದನೆ ನಡೆಸುವುದು. ಜೇಸಿ ಫೌಂಡೇಶನಿಗೆ ಹೆಚ್. ಜಿ.ಎಫ್. ಕೊಡುಗೆಯನ್ನು ನೀಡುವುದು, ಊರಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ, ಮಧ್ಯಂತರ ಸಮ್ಮೇಳನದಲ್ಲಿ ಭಾಗವಹಿಸುವುದು. ನೂರರಷ್ಟು ಶೇಕಡಾ ಫಲಿತಾಂಶ ಸಾಧಿಸಿದ ಪ್ರೌಢ ಶಾಲೆಗಳಿಗೆ ಅಭಿನಂದನೆ ಸಮರ್ಪಣೆ, ಕ್ಯಾನ್ಸರ್ ಪೀಡಿತ ಬಡ ಮಹಿಳೆಗೆ ಸಹಾಯಧನ ನೀಡಲು ನಿರ್ಧರಿಸಲಾಗಿದೆ.

ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ್ ರಾವ್ ಶುಭ ಹಾರೈಸಿದರು. ಯುವ ಜೇಸಿ ಶ್ರವಣ್ ವರದಿ ವಾಚಿಸಿದರು.

ಉಪಾಧ್ಯಕ್ಷರಾದ ಯು.ನರಸಿಂಹ ನಾಯಕ್, ಹರಿಶ್ಚಂದ್ರ ಆಚಾರ್ಯ, ಹಿರಿಯ ಸದಸ್ಯ ಜೋಸೆಫ್ ಪಿರೇರಾ ಸಲಹೆ ಸೂಚನೆಗಳನ್ನು ನೀಡಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ವಂದಿಸಿದರು.

Related posts

ಅಳದಂಗಡಿ: ಗುಡ್ ಫ್ಯೂಚೆರ್ ಆಂ.ಮಾ. ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ

Suddi Udaya

ತೆಕ್ಕಾರು : ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಪತಿ

Suddi Udaya

ಪಜಿರಡ್ಕ ಸೇತುವೆಯ ಡ್ಯಾಮ್ ಸ್ವಚ್ಛಗೊಳಿಸಿದ ಸ್ಥಳೀಯರು

Suddi Udaya

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ತಡೆದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

Suddi Udaya

ರಕ್ತೇಶ್ವರಿಪದವು ಸ.ಕಿ.ಪ್ರಾ. ಶಾಲೆಯಲ್ಲಿ ಶಾರದಾ ಪೂಜೆ

Suddi Udaya

ಹೈಕೋರ್ಟ್ ವಕೀಲ ನಾರಾಯಣ ಸ್ವಾಮಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಭೇಟಿ

Suddi Udaya
error: Content is protected !!