23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ನಾರಾವಿ: ಶ್ರೀ ಕ್ಷೇತ್ರ ಧ. ಗ್ರಾ. ಯೋ. ಬಿಸಿ ಟ್ರಸ್ಟ್ ನಿಂದ ಚಿತ್ತಾರ ಕೇಂದ್ರಿಕೃತ ಭತ್ತ ನರ್ಸರಿಗೆ ಚಾಲನೆ

ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ನಾರಾವಿಯಲ್ಲಿ ಚಿತ್ತಾರ ಕೇಂದ್ರೀಕೃತ ಭತ್ತ ನರ್ಸರಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಜಿಲ್ನಾಯ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಅಶೋಕ್ ಕುಮಾರ್ ಜೈನ್ ರವರು ಭತ್ತ ಕೃಷಿಗೆ ನರ್ಸರಿ ತುಂಬಾ ಅವಶ್ಯಕತೆ ಇದ್ದು ನಮ್ಮ ಭಾಗದಲ್ಲಿ ಯಾಂತ್ರಿಕೃತ ವಾಗಿ ಭತ್ತ ಬೇಸಾಯ ಮಾಡಲು ರೈತರಿಗೆ ತುಂಬಾ ಅನುಕೂಲವಾಗಿದೆ ಕಡಿಮೆ ಖರ್ಚಲ್ಲಿ ಪ್ರಶಾಂತ್ ರವರು ನರ್ಸರಿ ಮಾಡಿಕೊಡುತ್ತಿರುವುದು ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಮೇಲ್ವಿಚಾರಕರಾದ ಕೃಷ್ಣರವರು ಮುಂಗಾರು ಹಾಗೂ ಹಿಂಗಾರು ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿಸಲು ಪ್ರಶಾಂತ್ ಚಿತ್ತಾರ್ ರವರಿಗೆ ಯೋಜನೆ ವತಿಯಿಂದ ತರಬೇತಿಯನ್ನು ನೀಡಲಾಗಿದೆ. 10000 ಸಸಿ ಮಡಿಗೆ ಬೇಕಾಗಿರುವ ಮಣ್ಣು ಸಂಗ್ರಹಣೆ ಮಾಡಲಾಗಿದೆ ಟ್ರೇ ಗಳನ್ನು ಸಿ.ಎಚ್.ಎಸ್.ಸಿ ಕೇಂದ್ರ ದಿಂದ ಪಡೆಯಲಾಗಿದ್ದು ಒಂದು ಎಕ್ರೆ ಗೆ 70ರಿಂದ 80 ಸಸಿ ಮಡಿ ಬೇಕಾಗಿದ್ದು ಪ್ರಶಾಂತ್ ರವರು ಒಂದು ಸಸಿ ಮಡಿಗೆ ತಯಾರಿಸಿ ಕೊಡಲು 50 ರಿಂದ 60 rs ಪಡೆದು ತಯಾರಿ ಮಾಡಿ ಕೊಡುತ್ತಾರೆ ಈಗಾಗಲೇ 1000 ಸಸಿ ಮಡಿಗೆ ಬೇಡಿಕೆ ಬಂದಿದ್ದು ಎಲ್ಲಾ ರೈತರು ನರ್ಸರಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.


ಸಿ.ಎಚ್.ಎಸ್.ಸಿ ಬೆಳ್ತಂಗಡಿ ಮೆನೇಜರ್ ಸಚಿನ್ ಕುಮಾರ್ ಮಾತನಾಡಿ ಯಾಂತ್ರಿಕ್ರತ ಭತ್ತ ಬೇಸಾಯಕ್ಕೆ ನಮ್ಮಲ್ಲಿ ರೈಡಾನ್ ಹಾಗೂ ವಾಕ್ ಬಿಯಾಂಡ್ ನಾಟಿ ಮಷಿನ್ ಹಾಗೂ ಉಳುಮೆಗೆ ಬೇಕಾದ ಟ್ರ್ಯಾಕ್ಟರ್ ಕಡಿಮೆ ಬಾಡಿಗೆಗೆ ಸಿಗುವುದಾಗಿ ಮಾತನಾಡಿದರು. ವಲಯ ಅಧ್ಯಕ್ಷ ಅಶೋಕ್ ಎಮ್.ಕೆ, ನಾರಾವಿ ಸಿ.ಎಚ್.ಎಸ್.ಸಿ ಮೆನೇಜರ್ ಸಚಿನ್, ಪ್ರಗತಿಪರ ರೈತರಾದ ರವಿ ರಾಮ ಭಟ್, ಹರೀಶ್, ಗಂಗಾಧರ ಗೌಡ, ರಾಜು ಪೂಜಾರಿ, ಸುಧಾಕರ ಬೊಲ್ಲೊಟ್ಟು, ಅಣ್ಣಿ ಸಾಲಿಯಾನ್, ಸೇವಾಪ್ರತಿನಿಧಿ ಶುಭ ಹಾಗೂ ಸ್ಥಳೀಯ ರೈತರು, ಊರಿನ ಗಣ್ಯರು ಉಪಸ್ಥಿತರಿದ್ದರು.

Related posts

ವಿಶೇಷ ಚೇತನ ಮಕ್ಕಳಿಗೆ ನಲ್ಮೆ, ಸಂಯಮದಿಂದ ವಿಶೇಷ ಭವಿಷ್ಯ ರೂಪಿಸೋಣ: ಡಿ. ವೀರೇಂದ್ರ ಹೆಗ್ಗಡೆ

Suddi Udaya

ಭಾರತೀಯ ಸಾಂಸ್ಕೃತಿಕ ವಿಕಾಸಕ್ಕಾಗಿ ನರೇಂದ್ರ ಮೋದಿಜೀಯವರು ಮತ್ತೊಮ್ಮೆ ಪ್ರಧಾನಿಯಾಗಲು ಕ್ಯಾ| ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರನ್ನು ಗೆಲ್ಲಿಸಿ ಸಂಸ್ಕಾರ ಭಾರತೀ ಬೆಳ್ತಂಗಡಿ ಘಟಕ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಹೇಳಿಕೆ

Suddi Udaya

ಶಿಬಾಜೆ: ನಾರಾಯಣ ಗುರು ಮಂದಿರಕ್ಕೆ ರಕ್ಷಿತ್ ಶಿವರಾಂ ರವರಿಂದ ಮರದ ಬಾಗಿಲು ಹಸ್ತಾಂತರ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ ಸಮಾಜ ಸೇವಕ ಕೆ. ಮೋಹನ್ ಕುಮಾರ್ ಆಯ್ಕೆ

Suddi Udaya

ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರ ನೇಮಕ

Suddi Udaya

ಮಾ.3 ರಿಂದ ಮಾ.11ರವರೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ಮಾ.4ರಂದು ಡಾ. ಹೆಗ್ಗಡೆಯವರಿಂದ ನೂತನ ವಿಜಯಗೋಪುರ ಲೋಕಾರ್ಪಣೆ,

Suddi Udaya
error: Content is protected !!