July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ: ಉಪ್ಪಾರಪಳಿಕೆ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಆಚರಣೆ

ಕೊಕ್ಕಡ: ಶ್ರೀ ಕೃಷ್ಟ ಭಜನಾಮಂದಿರ ಉಪ್ಪಾರಪಳಿಕೆ ಕ್ರೀಡಾಂಗಣದಲ್ಲಿ 24ನೇ ವರ್ಷದ ಅಷ್ಟಮಿ ಆಚರಣೆ ಶ್ರದ್ದಾ ಗೆಳೆಯರ ಬಳಗ ಅಷ್ಟಮಿ ಆಚರಣ ಸಮಿತಿ ಮೂಲಕ ನಡೆಯಿತು.

ಕಾರ್ಯಕ್ರಮವು ಶ್ರದ್ದಾ ಗೆಳೆಯರ ಬಳಗ ಅಧ್ಯಕ್ಷ ಶ್ರೀಧರ್ ದೇರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೌತಡ್ಕ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಮುಂಡ್ರುಪ್ಪಾಡಿ ಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿ ಸನಾತನ ಧರ್ಮದ ಅಷ್ಟಮಿ ಆಚರಣೆ ಹಿಂದೂ ಧರ್ಮ ಒಗ್ಗೂಡುವಿಕೆ ಮೂಲಕ ಸಮಾಜಕ್ಕೆ ಧರ್ಮ ಸಂದೇಶ ಸಾರುತದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷರು ಶ್ರೀಮತಿ ಬೇಬಿ ಮಾತನಾಡಿ ಶುಭ ಹಾರೈಸಿದರು.. ಕೊಕ್ಕಡ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಗೌಡ ಮಲ್ಲಿಗೆ ಉಪಸ್ಥಿತರಿದ್ದರು.

ಶ್ರದ್ದಾ ಗೆಳೆಯರ ಬಳಗದ ಗೌರವ ಸಲಹೆಗಾರರು ಯೋಗೀಶ್ ಅಲಂಬಿಲ ಕಾರ್ಯಕ್ರಮ ನಿರೂಪಿಸಿದರು.. ಕುಶಾಂತ್ ಸ್ವಾಗತಿಸಿ, ಗೋಪಾಲ ಅಲಂಬಿಲ ವಂದಿಸಿದರು, ಬಳಿಕ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ಶ್ರೀನಾಥ್ ಬಡೆಕಾಯಿಲ್, ನವೀನ್ ಅಲಂಬಿಲ, ಶಿವಾನಂದ್ ಸಂಕೇಶ, ದಾಮೋದರ್ ಅಜ್ಜಾವರ, ಬಾಲಕೃಷ್ಣ ಬಳಕ್ಕ, ಶ್ರೀಕಾಂತ್ ಬಡೆಕಾಯಿಲ್, ಆನಂದ ಅಡೈ, ರಮೇಶ್ ಕುಡ್ಲ ಶ್ರದ್ದಾ ಗೆಳೆಯರ ಬಳಗ ಸದಸ್ಯರು, ಗ್ರಾಮಸ್ಥರು ಸಹಕರ ನೀಡಿದರು.

Related posts

ನಾಲ್ಕೂರು: ಕೆಲ ಸಮಯದಿಂದ ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಕಾಟ ಮನೆಯ ಸಾಕು ಪ್ರಾಣಿಗಳ ಮೇಲೆ ದಾಳಿ, ಭಯಬೀತರಾದ ಗ್ರಾಮಸ್ಥರು, ಅರಣ್ಯ ಇಲಾಖೆಗೆ ಮಾಹಿತಿ, ಸ್ಪಂದನೆ

Suddi Udaya

ಡಿ.4: ಬೆಳ್ತಂಗಡಿಯಲ್ಲಿ ಮಂಜೂಷ ಗ್ಲಾಸ್ & ಪ್ಲೈವುಡ್ಸ್ ಮಳಿಗೆ ಶುಭಾರಂಭ

Suddi Udaya

ರಾಜ್ಯ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ : ಇದು ಬಡಜನರ ಮೇಲಿನ ಮರಣ ಶಾಸನ: ಶೇಖರ ಎಲ್

Suddi Udaya

ಜ.3: ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಗೆಉಡುಪಿ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು

Suddi Udaya

ಎಸೆಸೆಲ್ಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರೇ ಮೇಲುಗೈ

Suddi Udaya
error: Content is protected !!