September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ ಲಯನ್ಸ್ ಝೋನ್ ಮಟ್ಟದ ಸೆಮಿನಾರ್

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಯ ಪ್ರಾಯೋಜಕತ್ವದಲ್ಲಿ ಪ್ರಾಂತ್ಯ-12 ರಲ್ಲಿ ವಲಯ -2 ರ ಝೋನ್ ಮಟ್ಟದ ಲಯನ್ಸ್ ಕ್ಲಬ್‌ಗಳ ಪಿಎಸ್‌ಟಿ ಸೆಮಿನಾರ್ ಲಯನ್ಸ್ ಭವನ ಬೆಳ್ತಂಗಡಿ ಯಲ್ಲಿ ಜರುಗಿತು.


ಜಿಲ್ಲಾ ಜಿಎಸ್‌ಟಿ ಕಾರ್ಡಿನೇಟರ್ ಲ. ಜಗದೀಶ್ ಎಡಪಡಿತ್ತಾಯ, ಅಸೋಸಿಯೇಟೆಡ್ ಕೋರ್ಡಿನೇಟರ್ ಲ. ನಿತ್ಯಾನಂದ ನಾವರ, ಜಿಎಂಟಿ ಅಸೋಸಿಯೇಟೆಡ್ ಕೋರ್ಡಿನೇಟರ್ ಲ. ರಾಜು ಶೆಟ್ಟಿ ಬೆಂಗೆತ್ಯಾರು, ಜಿಎಲ್‌ಟಿ ಅಸೋಸಿಯೇಟೆಡ್ ಕೋರ್ಡಿನೇಟರ್ ಲ. ಧರಣೇಂದ್ರ ಕೆ ಜೈನ್, ಜಿಇಟಿ ಕೋರ್ಡಿನೇಟರ್ ಲ. ವಸಂತ ಶೆಟ್ಟಿ,ಡಿ ಜಿ ಪ್ರೋಗ್ರಾಂ ಬಗ್ಗೆ ಲ. ಶಿವಪ್ರಸಾದ್ ಹೆಗ್ಡೆ ಇವರುಗಳು ತರಬೇತಿ ನೀಡಿದರು.


ಮೂಡುಬಿದಿರೆ, ವೇಣೂರು, ಸುಲ್ಕೇರಿ ಹಾಗೂ ಬೆಳ್ತಂಗಡಿ ಲಯನ್ಸ್ ಕ್ಲಬ್ ಗಳ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಜರಿದ್ದರು.


ವಲಯಾಧ್ಯಕ್ಷ ಲ. ದಿನೇಶ್ ಎಂ. ಕೆ ರವರು ಪ್ರಮಾಣ ಪತ್ರ ವಿತರಿಸಿದರು. ಬೆಳ್ತಂಗಡಿ ಸುವರ್ಣ ವರ್ಷದ ಲಯನ್ಸ್ ಅಧ್ಯಕ್ಷ ಲ. ಉಮೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಲ. ಅನಂತಕೃಷ್ಣ ಧನ್ಯವಾದವಿತ್ತರು. ಲ. ಧರಣೇಂದ್ರ ಕೆ ಜೈನ್ ನಿರೂಪಿಸಿದರು.

Related posts

ತೀವ್ರ ಅನಾರೋಗ್ಯದಿಂದ ಬಳಲುತಿದ್ದ ಸುರೇಶ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವಲ್ಲಿ ಮಾನವೀಯತೆ ಮೆರೆದ ಬಂದಾರು ಗ್ರಾ.ಪಂ.ಸದಸ್ಯರು, ಸ್ಥಳೀಯರು ಹಾಗೂ ಪದ್ಮುಂಜ ಪ್ರಾಥಮಿಕ ಅರೋಗ್ಯ ಕೇಂದ್ರ ವೈದ್ಯರ ತಂಡ

Suddi Udaya

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ 25 ವಿದ್ಯಾರ್ಥಿಗಳು ಉತ್ತೀರ್ಣ

Suddi Udaya

ವೇಣೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಅಬ್ದುಲ್ ರಝಾಕ್ ರವರಿಗೆ ವಿದಾಯ ಕೂಟ

Suddi Udaya

ಉಜಿರೆ: ಗುರಿಪಳ್ಳ ನಿವಾಸಿ ಶ್ರದ್ಧಾ ಶೆಟ್ಟಿ ನಿಧನ

Suddi Udaya

ಅಂತರ್ ಕಾಲೇಜು ಮಟ್ಟದ ಸ್ಪರ್ಧೆ: ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya
error: Content is protected !!