ಗುರುವಾಯನಕೆರೆ: ಬರುವ ಡಿಸೆಂಬರ್ 2ನೇ ತಾರೀಕು ಶನಿವಾರ ನಡೆಯುವ ಕಾರಣಿಕ ದೈವ ಪಿಲಿಚಾಮುಂಡಿಕಲ್ಲು ಶ್ರೀ ಪಿಲಿಚಾಮುಂಡಿ ದೈವದ “ದೊಂಪದಬಲಿ ಉತ್ಸವ” ದ “ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನ.10ರಂದು ಪಾಡ್ಯಾರು ಬೀಡು ಮನೆಯಲ್ಲಿ ಜರುಗಿತು.

ಆಮಂತ್ರಣ ಪತ್ರಿಕೆಯನ್ನು ಶ್ರೀನಿವಾಸ ಅಸ್ರಣ್ಣ ಮೂಡುಮನೆ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರುಬೀಡು, ಅಧ್ಯಕ್ಷ ಸೋಮಶೇಖರ ದೇವಸ್ಯ ದೇವಸ್ಯ ಬಾಳಿಕೆ, ಪ್ರಧಾನ ಕಾರ್ಯದರ್ಶಿ ಜಿ. ನಾಗೇಶ್ ಮೂಲ್ಯ, ಕಾರ್ಯದರ್ಶಿ ಶೋಭಿತ್ ಜೈನ್, ಕೋಶಾಧಿಕಾರಿ ನಾರಾಯಣ ಆಚಾರ್ಯ ಬರಾಯ, ಉಪಾಧ್ಯಕ್ಷ ವಿತೇಶ್ ಬಂಗೇರ,

ಸಮಿತಿ ಸದಸ್ಯರಾದ ಸುಧಾಕರ ಗೌಡ, ಜಯರಾಮ ಶೆಟ್ಟಿ, ಹೇಮಂತ ಶೆಟ್ಟಿ ದೇವಸ್ಯ, ಚಂದ್ರಹಾಸ ದಾಸ್, ರಾಮಚಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕೃಷ್ಣಯ್ಯ ಆಚಾರ್ಯ, ಸುನೀಶ್ ಕುಮಾರ್ ಕಡಂಬು, ಪುರಂದರ ಪಾಡ್ಯಾರು, ಶಿವಾಜಿ ರಾವ್, ತೇಜಸ್ವಿ ಪಾಡ್ಯಾರು, ದಾಮೋದರ ಪಾಡ್ಯಾರು ಮೊದಲಾದವರು ಉಪಸ್ಥಿತರಿದ್ದರು.













