22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಡಿರುದ್ಯಾವರ: ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಹರಿಕಥಾ ಕ್ಷೇತ್ರದಲ್ಲಿ ಸ್ವ ಪರಿಶ್ರಮದ ಮೂಲಕ ಐದು ದಶಕಗಳಿಗೂ ಹೆಚ್ಚುಕಾಲ ಸೇವೆಗೈದು 1997ರಲ್ಲಿ ಗತರಾಗಿರುವ ದಿ. ಕೆ.ಎನ್. ಭಟ್ ಶಿರಾಡಿಪಾಲರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಯೋಜಿತ ಶತನಮನ ಶತಸನ್ಮಾನ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದೆ.


ಜ. 13, 2024 ಶನಿವಾರದಂದು ಬೆಳ್ರಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಶಿರಾಡಿಪಾಲರ ಕಿನ್ಯಡ್ಕ ಮನೆಯಲ್ಲಿ ಜರಗಲಿರುವ ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಡಿ. 3ರಂದು ಕಡಿರುದ್ಯಾವರ ಗ್ರಾಮದ ಕಿನ್ಯಡ್ಕ ಮನೆಯಲ್ಲಿ ಬಿಡುಗಡೆಗೊಳಿಸಲಾಯಿತು. ಮೈಸೂರಿನ ಲೆಕ್ಕ ಪರಿಶೋಧಕರಾದ ಭಾಸ್ಕರ ರಾವ್-ಜಯಂತಿ ದಂಪತಿಗಳು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ವೇ.ಮೂ. ರಜನೀಶ್ ಫಡ್ಕೆಯವರು ಶ್ರೀ ಸಪ್ತಶತಿ ಪಾರಾಯಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿರಾಡಿಪಾಲರ ಪುತ್ರ ಶಶಿಧರ ಪರಾಂಜಪೆ- ರಮಾ ಪರಾಂಜಪೆ ದಂಪತಿಯ, ಪುತ್ರಿಯರಾದ ಅನುಪಮಾ ಚಿಪ್ಳೂಣಕರ್, ವಿದ್ಯಾಡೋಂಗ್ರೆ, ಮೊಮ್ಮಗ ಶರತ್ ಚಂದ್ರ ಪರಾಂಜಪೆ- ಅಪರ್ಣ ದಂಪತಿಗಳು, ಶತನಮನ ಶತಸನ್ಮಾನ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

ಎಸ್ ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರಿಗೆ ‘ಸಹಕಾರ ಭೂಷಣ’ ಪ್ರಶಸ್ತಿ

Suddi Udaya

ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯದ ಕ್ರೀಡಾಕೂಟ ಸಮಿತಿ ರಚನೆ

Suddi Udaya

ವೇಣೂರು ಮಹಾ ಮಸ್ತಕಾಭಿಷೇಕಕ್ಕೆ ಶಾಸಕ ಹರೀಶ್ ಪೂಂಜರವರಿಗೆ ಆಮಂತ್ರಣ ನೀಡಿ‌ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಮಹಾ ಮಸ್ತಕಾಭಿಷೇಕ ಸಮಿತಿ ಪದಾಧಿಕಾರಿಗಳು

Suddi Udaya

ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” : ದೇಶಾದ್ಯಂತ ಹೆಚ್ಚುತ್ತಿದೆ ಸ್ವಚ್ಛತೆಯ ಜಾಗೃತಿ: ಪ್ರತಾಪಸಿಂಹ ನಾಯಕ್‌

Suddi Udaya

ಮಡಂತ್ಯಾರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ತೆಂಕಕಾರಂದೂರು: ಪೆರಾಲ್ದರಕಟ್ಟೆ ಮಸೀದಿಯಲ್ಲಿ ಮುಸ್ಲಿಮರ ಪವಿತ್ರ ಹಬ್ಬ ಈದುಲ್ ಪಿತ್ರ್ ಆಚರಣೆ

Suddi Udaya
error: Content is protected !!