25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿರಾಜ್ಯ ಸುದ್ದಿವರದಿ

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೀಲೇಶ್ವರದ ತಂತ್ರಿವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಗಳ ಭೇಟಿ

ತೆಕ್ಕಾರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಸಂಬಂಧ ಪಟ್ಟಂತೆ ಸೂಕ್ತವಾದ ಸಲಹೆ, ಮಾಹಿತಿ ನೀಡಲು ನೀಲೇಶ್ವರದ ತಂತ್ರಿವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಯವರು ಆಗಮಿಸಿದ್ದರು.


ಟ್ರಸ್ಟ್ ಅಧ್ಯಕ್ಷರಾದ ನಾಗಭೂಷಣ ರಾವ್ ಬಾಗ್ಲೋಡಿ, ತುಕಾರಾಂ ನಾಯಕ್, ಹಾಗೂ ಪ್ರಮುಖರಲ್ಲಿ ಚರ್ಚೆ ನಡೆಸಿ ಗರ್ಭಗುಡಿ, ಪಾಣಿಪೀಠ ಅರ್ಧ ವೃತ್ತಾಕಾರದ ವಿಶಿಷ್ಟ ರೀತಿಯಲ್ಲಿ ನಿರ್ಮಿಸಲು ವಾಸ್ತು ಶಿಲ್ಪಿ ಜಗನ್ನಿವಾಸ್ ರಾವ್ ಅವರೊಂದಿಗೆ ಸಂವಾದ ನಡೆಸಿ ಮೂರು ತಿಂಗಳಲ್ಲಿ ಜಮೀನು ಸಮತಟ್ಟು ಮಾಡಿ ಬಾವಿ ಕೆಲಸ ಸಮಾಪ್ತಿಗೊಳಿಸಿ ಮತ್ತೊಮ್ಮೆ ತಂತ್ರಿವರ್ಯರನ್ನ ಕರೆಸಿ ಮೂರ್ತಿ ಜಲಧಿವಾಸ ಮಾಡಿ ಗಂಗಾಪೂಜೆ, ಗೋಪೂಜೆ, ಬ್ರಾಹ್ಮಣ ಸತ್ಕಾರ ಮಾಡಿ ವೈದಿಕ ಕಾರ್ಯ ನೆರವೇರಿಸಿ ಶಿಲಾನ್ಯಾಸ ಕಾರ್ಯಕ್ರಮ ಮಾಡುವ ಶುಭ ಮುಹೂರ್ತ ನಿಗದಿ ಪಡಿಸಲಾಗುವುದು. ವಿಶೇಷವಾದ ವಾಸ್ತು ಶಿಲ್ಪದಲ್ಲಿ ಶ್ರೀ ಗೋಪಾಲಕೃಷ್ಣ ದೇವಾಲಯ ನಿರ್ಮಾಣ ಕಾರ್ಯರೂಪಕ್ಕೆ ಮಹತ್ತರ ವಿಷಯ ಹಂಚಿಕೊಂಡರು. ಈ ಭೂಮಿಯು ಮಣ್ಣಿನ ಸತ್ವ ಕಳೆದು ಕೊಳ್ಳದೆ ಫಲವತ್ತತೆ ಉಳಿಸಿಕೊಂಡಿದೆ ಇಲ್ಲಿಗೆ ಆಗಮಿಸಿದಾಗ ಮನಸ್ಸು ಮುಂದಗೊಳ್ಳುತಿದೆ ದೇವರನ್ನು ಆರಾಧಿಸುವ ಭಕ್ತರ ಪಾಲಿನ ಸಕಲ ಇಷ್ಟಾರ್ಥ ಸಿದ್ಧಿಸುವ ಕೇಂದ್ರ ವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಿತಿಯಿಂದ ಭಕ್ತರ ಪರವಾಗಿ ಪ್ರಮುಖರು ಭಕ್ತಿ ಭಾವದ ಸ್ವಾಗತ ನೀಡಿ, ಫಲಪುಷ್ಪ ನೀಡಿ, ಸತ್ಕರಿಸಿ ಗೌರವಿಸಲಾಯಿತು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಊರ ಭಕ್ತರು ಭಾಗವಹಿಸಿದ್ದರು.

Related posts

ಬೆಳಾಲು-ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯ ಶಾಲಾ ಪ್ರಾರಂಭೋತ್ಸವ

Suddi Udaya

ಶಿರ್ಲಾಲು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ವಕೀಲ ಮುರಳಿ ಬಿ. ದಂಪತಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಸೇವಾಭಾರತಿಯಿಂದ 32ನೇ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ನೇಲ್ಯಡ್ಕದಲ್ಲಿ ಉದ್ಘಾಟನೆ

Suddi Udaya

ಸಾರಿಗೆ ನಿಯಮಗಳ ಉಲ್ಲಂಘನೆಯ ಪ್ರಕರಣಗಳು : ಡಿ.12 ರ ಒಳಗೆ ದಂಡ ಕಟ್ಟಿದಲ್ಲಿ ಶೇ 50 ರಿಯಾಯಿತಿ

Suddi Udaya

ಜ.27: ಮಡಂತ್ಯಾರು ಗ್ರಾಮ ಪಂಚಾಯತ್ ನಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಪ.ಜಾತಿ / ಪ.ಪಂಗಡ ಮತ್ತು ದಿವ್ಯಾಂಗಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ

Suddi Udaya

ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸಲು ಸರಕಾರದ ಗಮನ ಸೆಳೆಯುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗೆ ಮನವಿ

Suddi Udaya
error: Content is protected !!