September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಹಿರಿಯರ ಸೇವಾ ಪ್ರತಿಷ್ಠಾನದಿಂದ ದಶ ಸಾಧಕರಿಗೆ ಗೌರವಾರ್ಪಣೆ     

 ಕೊಕ್ಕಡ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಟಾನದ ವತಿಯಿಂದ ಡಿ 17ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ  ಗಣೇಶ ಕಲಾ ಭವನದಲ್ಲಿ ನಡೆದ ದ್ವಿತೀಯ ವಾರ್ಷಿಕೋತ್ಸವದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಯವರು ಹಾಗು ಗಣ್ಯ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.                                                                                 

 ಶ್ರೀ  ಎಡನೀರು  ಮಠದ ಆಡಳಿತ ಅಧಿಕಾರಿ ರಾಜೇಂದ್ರ ಕಲ್ಲೂರಾಯ, ಮೂಡಬಿದ್ರಿಯ ನ್ಯಾಯವಾದಿ ಬಾಹುಬಲಿ ಪ್ರಸಾದ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಸಂತ ಸುವರ್ಣ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಂಗಯ್ಯ ಸುಳ್ಯ, ಪರಿಸರ ತಜ್ಞ ಪ್ರೊ.ರಾಜಮಣಿ  ರಾಮಕುಂಜ, ಸುರೇಶ ಬೈಂದೂರು,ಸಾಮಾಜಿಕ ಕಾರ್ಯಕರ್ತ ಉಮೇಶ್ ಶೆಣೈ, ಶ್ರೀ ಕ್ಷೇತ್ರ ಸೌತಡ್ಕದ ಸಿಬಂದಿಗಳಾದ  ಬಿ.ಕೇಶವ ಶಬರಾಯ,   ಎಂ .ವೈ ರಾಮಕೃಷ್ಣ ಮತ್ತು ಶ್ರೀಮತಿ ವಿನೋದ ಕೆ.ಶೆಟ್ಟಿ ಅವರನ್ನು ಎಡನೀರು ಶ್ರೀಗಳವರು ಮತ್ತು ಗಣ್ಯ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ಜಯರಾಮ ಭಂಡಾರಿ, ಭವಾನಿಶಂಕರ್ ಮತ್ತು ಮಹಾಬಲ ರೈ   ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರ ಪರವಾಗಿ  ರಾಜೇಂದ್ರ ಕಲ್ಲೂರಾಯ ಉತ್ತರಿಸಿ ವಯಸ್ಸು, ಸ್ಥಾನಮಾನ, ಗಳಿಸಿದ ಜ್ಞಾನ ಸಂಪಾದನೆ ಮತ್ತು ಸಮಾಜಮುಖಿ ಕೆಲಸಗಳಿಂದ  ಹಿರಿತನ ಪಡೆಯುತ್ತಾರೆ. ಹಿರಿಯರ ಸಮಸ್ಯೆಗಳಿಗೆ  ಪ್ರತಿಷ್ಠಾನದಿಂದ ಪರಿಹಾರ  ದೊರೆಯಲಿ ಎಂದು ಆಶಿಸಿದರು.

Related posts

ಬೆಳ್ತಂಗಡಿ ತಾಲ್ಲೂಕಿನ ವಿವಿಧ ಚಚ್೯ಗಳಿಗೆ ಭೇಟಿ ನೀಡಿ, ಮತ ಯಾಚಿಸಿದ ಹರೀಶ್ ಪೂಂಜ

Suddi Udaya

ಪುದುವೆಟ್ಟು: ಅಕ್ರಮ ಮರಳು ಅಡ್ಡೆ‌ಗೆ ಧರ್ಮಸ್ಥಳ ಪೊಲೀಸ್ ದಾಳಿ

Suddi Udaya

ಧರ್ಮಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ

Suddi Udaya

ಧರ್ಮಸ್ಥಳ ಅಜೆಕುರಿ ಅಕ್ರಮ ಮರಳು ಅಡ್ಡೆಗೆ ಗಣಿ ಇಲಾಖೆ ದಾಳಿ: ಸ್ಥಳದಲ್ಲಿದ್ದ ನಾಲ್ಕು ಬೋಟ್ ಮತ್ತು ಮರಳು ವಶಕ್ಕೆ

Suddi Udaya

ಉಜಿರೆ: ಮಾಚಾರು ನಿವಾಸಿ ನಿವೃತ್ತ ಮೆಸ್ಕಾಂ ಉದ್ಯೋಗಿ ಆನಂದ ಗೌಡ ನಿಧನ

Suddi Udaya

ವಿದ್ವತ್ ಜೆಇಇ ಸಾಧಕರಿಗೆ ಕಾಲೇಜು ವತಿಯಿಂದ ಅಭಿನಂದನೆ: 35 ವಿದ್ಯಾರ್ಥಿಗಳ ಪೈಕಿ 21 ಮಂದಿ ಶೇ.90 ಅಧಿಕ ಪರ್ಸೆಂಟೈಲ್ ಪಡೆದ ದಾಖಲೆ

Suddi Udaya
error: Content is protected !!