25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಶಿಥಿಲಗೊಂಡ ಗುರಿಪಳ್ಳ ತಾರಗಂಡಿ ಸೇತುವೆ: ಲೋಕೋಪಯೋಗಿ ಸಚಿವರನ್ನು ಬೇಟಿಯಾಗಿ ಶೀಘ್ರ ಅನುದಾನ ಬಿಡುಗಡೆ ಮಾಡಿ ಹೊಸ ಸೇತುವೆ ನಿರ್ಮಿಸುವಂತೆ ರಕ್ಷಿತ್ ಶಿವರಾಂ ಮನವಿ

ಬೆಳ್ತಂಗಡಿ: ಉಜಿರೆ ಗ್ರಾಮದ ಗುರಿಪಳ್ಳದ ತಾರಗಂಡಿ ಕಿರು ಸೇತುವೆಯು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಇನ್ನೇನು ಕೆಲವೇ ದಿವಸಗಳಲ್ಲಿ ಕುಸಿಯುವ ಬೀತಿಯಲ್ಲಿದೆ ಇದನ್ನು ಮನಗಂಡ ರಕ್ಷಿತ್ ಶಿವರಾಂರವರು ಊರವರ ಬೇಡಿಕೆಯಂತೆ ಇತ್ತೀಚೆಗೆ ಸೇತುವೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಲೋಕೋಪಯೋಗಿ ಉಪ ವಿಭಾಗ ಬೆಳ್ತಂಗಡಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಸಮಗ್ರ ವರದಿ ತಯಾರಿಸಿದರು.


ಈ ವರದಿಯನ್ನು ಹಾಗೂ ಊರವರ ಬಹುದಿನಗಳ ಬೇಡಿಕೆಯ ಪತ್ರವನ್ನು ಇತ್ತೀಚೆಗೆ ಬೆಂಗಳೂರಿಗೆ ತೆರಳಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಇವರನ್ನು ಬೇಟಿಯಾಗಿ ಅತೀ ತುರ್ತಾಗಿ ಈ ಕಿರು ಸೇತುವೆಗೆ ಅನುದಾನ ಒದಗಿಸಿ ಮುಂದಿನ ಮಳೆಗಾಲ ಪ್ರಾರಂಭದ ಒಳಗೆ ಸೇತುವೆ ನಿರ್ಮಿಸಿ ಜನರ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಶೀಘ್ರದಲ್ಲೆ ಕಿರು ಸೇತುವೆಗೆ ಅನುದಾನ ಬಿಡುಗಡೆಗೊಳಿಸುತ್ತೇವೆ ಎಂಬ ಭರವಸೆ ನೀಡಿದರು.


ಈ ಸೇತುವೆಯ ಮೂಲಕ ಬಂಗಾಡಿ- ಕೊಲ್ಲಿ- ಇಂದಬೆಟ್ಟು- ಗುರಿಪಳ್ಳಕ್ಕೆ ದಿನನಿತ್ಯ ನೂರಾರು ವಾಹನಗಳು ಸಂಚರಿಸುತಿದ್ದು ನೂರಾರು ವಿಧ್ಯಾರ್ಥಿಗಳು ದಿನನಿತ್ಯ ಈ ಸೇತುವೆಯ ಮೂಲಕ ಹಾದು ಶಾಲೆಗಳಿಗೆ ಹೋಗುತ್ತಿದ್ದಾರೆ. ಅತೀ ಅಗತ್ಯವಾದ ಈ ಸೇತುವೆಯು ಕುಸಿಯುವ ಮುಂಚಿತವಾಗಿ ಹೊಸ ಸೇತುವೆ ನಿರ್ಮಾಣ ಆಗಿ ಉದ್ಘಾಟನೆಗೊಂಡರೆ ಈ ಸಂಪರ್ಕವನ್ನು ಅವಲಂಬಿಸಿದ ಅದೆಷ್ಟೋ ಕುಟುಂಬಗಳಿಗೆ ಉಪಯೋಗವಾಗಲಿದೆ. ರಕ್ಷಿತ್ ಶಿವರಾಂರವರ ಈ ಪ್ರಯತ್ನ ಊರವರಿಗೆ ಹೊಸ ಆಶಾಭಾವನೆ ಹುಟ್ಟಿಸಿದೆ.

Related posts

ಆದಿ ಪಜಿರಡ್ಕದಲ್ಲಿ ಜಾತ್ರಾ ಮಹೋತ್ಸವ

Suddi Udaya

ಭೀಕರ ರಸ್ತೆ ಅಪಘಾತ; ಓರ್ವ ಯುವತಿಗೆ ಗಂಭೀರ ಗಾಯ

Suddi Udaya

ಪುಂಜಾಲಕಟ್ಟೆ ಕೆಪಿಎಸ್ ಪ.ಪೂ. ವಿಭಾಗದಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನ

Suddi Udaya

ಬಳಂಜ ವಾಲಿಬಾಲ್ ಕ್ಲಬ್ ಸಹಯೋಗದೊಂದಿಗೆ, ಇಕೋಫ್ರೆಶ್ ಎಂಟರ್ಪ್ರೈಸಸ್ ವತಿಯಿಂದ ಹೊನಲು ಬೆಳಕಿನ ಪುರುಷರ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾಟ

Suddi Udaya

ನಾಳ ದೇವಸ್ಥಾನದ ಧನುಪೂಜೆಗೆಂದು ಮನೆಯಿಂದ ಹೊರಟ ಬಾಲಕ ಸುಮಂತ್ ನಿಗೂಢ ನಾಪತ್ತೆ: ತೋಟದ ಕೆರೆಯ ಬಳಿ ಕಂಡು ಬಂದ ರಕ್ತದ ಕಲೆಗಳು: ಮನೆಯವರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಸೃಷ್ಟಿಯಾದ ಆತಂಕ

Suddi Udaya

ಮೇ 20,21: ಸಿಇಟಿ ಪರೀಕ್ಷೆ

Suddi Udaya
error: Content is protected !!