ಗರ್ಡಾಡಿ: ಅಳದಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೀಜೆಂಟ್ ಮಳಿಗೆಯನ್ನು ಪಡಂಗಡಿ ಗ್ರಾಮದ ಗರ್ಡಾಡಿ-ಸೋಣಂದೂರು ರಸ್ತೆಯ ಹೊನ್ನಕಟ್ಟೆ ಎಂಬಲ್ಲಿಗೆ ಸ್ಥಳಾಂತರಿಸಿ ಉದ್ಘಾಟನೆ ನೆರವೇರಿತು.
ಮಳಿಗೆಯ ಉದ್ಘಾಟನೆಯನ್ನು ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ನೇರವೇರಿಸಿದರು. ಮಂಗಳೂರು ಲೆಕ್ಕ ಪರಿಶೋಧಕಾರದ ಎ.ಆರ್. ಹೆಗ್ಡೆ ದೀಪ ಪ್ರಜ್ವಲಿಸಿದರು. ಸಂಸ್ಥೆಯ ಮಾಲಕ ಸುಂದರ ಹೆಗ್ಡೆ ಎಲ್ಲರನ್ನು ಗೌರವಿಸಿ, ಸತ್ಕರಿಸಿದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಉದ್ಯಮಿ ಜಯಂತ್ ಕೋಟ್ಯಾನ್ ಮರೋಡಿ, ಪಡಂಗಡಿ ಗ್ರಾ. ಪಂ. ಅಧ್ಯಕ್ಷ ವಸಂತ ಪೂಜಾರಿ, ಪಡಂಗಡಿ ಗ್ರಾ.ಪಂ. ಸದಸ್ಯ, ಉದ್ಯಮಿ ಸಂತೋಷ್ ಜೈನ್, ಪಡಂಗಡಿ ಹಾ. ಉ. ಸ.ಸಂಘ ಅಧ್ಯಕ್ಷ ಮ್ಯಾಕ್ಸಿಂ ಸೀಕ್ವೆರಾ, ಸುಮತಿ ಹೆಗ್ಡೆ, ಸೌಮ್ಯ ಸುಂದರ ಹೆಗ್ಡೆ, ಪ್ರೇಮ ಹೆಗ್ಡೆ, ಸೌರಭ್ ಹೆಗ್ಡೆ (USA), ಸೌಮಿನಿ ಹೆಗ್ಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಗನ್ನಾಥ್ ಪ್ರಾರ್ಥಿಸಿ, ಜಗದೀಶ್ ನಿರೂಪಿಸಿದರು, ಉಮೇಶ್ ನಡ್ತಿಕಲ್ಲು ವಂದಿಸಿದರು.













